ಮಂಗಳೂರು ನಗರದಲ್ಲಿಯೂ ಸಂಚರಿಸಲಿವೆ KSRTC ಬಸ್​ಗಳು

Prasthutha|

- Advertisement -

ಮಂಗಳೂರು: ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ ಜಾರಿ ಬಳಿಕವಂತೂ ನಗರದಲ್ಲಿಯೂ ಸರ್ಕಾರಿ ಬಸ್​​ ಗಳನ್ನು ಕಲ್ಪಿಸಬೇಕು ಎಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಇದೀಗ ನಗರವಾಸಿಗಳಿಗೆ ಕೆಎಸ್​ಆರ್​ಟಿಸಿ ಶುಭ ಸುದ್ದಿ ನೀಡಿದ್ದು, ಮಂಗಳೂರಿನ ಯಾವ್ಯಾವ ರೂಟ್​ಗಳಲ್ಲಿ ಬಸ್​ಗಳನ್ನು ಕಾರ್ಯಾಚರಣೆಗೆ ಇಳಿಸಬಹುದು ಎಂಬ ಬಗ್ಗೆ ಸಮಕ್ಷೆ ನಡೆಸಿದೆ.

ಕೆಎಸ್‌ ಆರ್‌ ಟಿಸಿ ಮಂಗಳೂರು ವಿಭಾಗವು ನಗರದಲ್ಲಿ ತನ್ನ ಸೇವೆಗಳನ್ನು ಹೆಚ್ಚಿಸಲು ಚಿಂತನೆ ನಡೆಸಿರುವ ಬಗ್ಗೆ ವರದಿಯಾಗಿದೆ.

- Advertisement -


ಹೆಚ್ಚಿನ ಬೇಡಿಕೆ ಇರುವ ಎಲ್ಲಾ ಮಾರ್ಗಗಳಿಗೆ ಬಸ್‌ಗಳನ್ನು ಒದಗಿಸಲು ನಮಗೆ ಸಾಧ್ಯವಾಗದಿದ್ದರೂ, ನಾವು ಮೂರು-ನಾಲ್ಕು ಮಾರ್ಗಗಳನ್ನು ಸಂಪರ್ಕಿಸಲು ಮತ್ತು ಒಂದು ಬಸ್ ಅನ್ನು ಒದಗಿಸಲು ಯೋಜಿಸುತ್ತಿದ್ದೇವೆ ಎಂದು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.



Join Whatsapp