ದಲಿತ ಯುವತಿಯನ್ನು ವಿವಾಹವಾಗಿದ್ದ ಯುವಕನ ಥಳಿಸಿ ಹತ್ಯೆ

Prasthutha|

ಗುರುಗ್ರಾಮ್ : ದಲಿತ ಯುವತಿಯನ್ನು ವಿವಾಹವಾಗಿದ್ದ ಯುವಕನೊಬ್ಬನನ್ನು, ಯುವತಿಯ ಗ್ರಾಮಸ್ಥರು ಥಳಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.

- Advertisement -

ನ.9ರಂದು ಬಾದ್ ಶಾ ಪುರದಲ್ಲಿ ಯುವಕರ ತಂಡವೊಂದು ರಾಜಸ್ಥಾನದ ಅಲ್ವಾರ್ ಮೂಲದ 28ರ ಹರೆಯದ ಆಕಾಶ್ ಎಂಬಾತನ ಮೇಲೆ ದಾಳಿ ನಡೆಸಿತ್ತು. ಆಕಾಶ್ 26ರ ಹರೆಯದ ದಲಿತ ಯುವತಿಯನ್ನು ವಿವಾಹವಾಗಿದ್ದ. ವಿವಾಹದ ನಂತರ ಆಕಾಶ್ ಗೆ ಫೋನ್ ಮೂಲಕ ಬೆದರಿಕೆ ಕರೆಗಳು ಬರುತ್ತಿದ್ದವು ಎಂದು ಆತನ ಸಹೋದರ ತಿಳಿಸಿದ್ದಾರೆ.

ಮದುವೆ ನಡೆದು ಆರು ತಿಂಗಳ ಬಳಿಕ, ಪತ್ನಿಯ ಊರಿಗೆ ಮೊದಲ ಬಾರಿ ದಂಪತಿ ತೆರಳಿತ್ತು. ಈ ವೇಳೆ ನಡೆದ ಸಣ್ಣ ಘಟನೆಯೊಂದು ವಾಗ್ವಾದಕ್ಕೆ ತೆರಳಿ, ಗುಂಪೊಂದು ಆಕಾಶ್ ಮೇಲೆ ಹಲ್ಲೆ ನಡೆಸಿತ್ತು. ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಆಕಾಶ್ ಈಗ ಕೊನೆಯುಸಿರೆಳೆದಿದ್ದಾನೆ.

- Advertisement -

ಪ್ರಕರಣಕ್ಕೆ ಸಂಬಂಧಿಸಿ ಅಜಯ್ ಅಲಿಯಾಸ್ ಪ್ರಮಿ ಜಾತವ್, ರವಿ ಸಿಂಗ್ ಜಾತವ್, ಪವನ್ ಜಾತವ್, ಧರ್ಮೇಂದ್ರ ಜಾತವ್, ಮೋಹಿತ್ ಜಾತವ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.   

Join Whatsapp