ಗೋವಾದಲ್ಲಿ ಹನಿಮೂನ್ ಎಂದೇಳಿ ಅಯೋಧ್ಯೆಗೆ ಕರೆದುಕೊಂಡು ಹೋದ ಪತಿ: ವಿಚ್ಚೇದನ ಕೇಳಿದ ಪತ್ನಿ.!

Prasthutha|

ಭೋಪಾಲ್: ಹನಿಮೂನಿಗೆ ಗೋವಾಕ್ಕೆ ಕರೆದುಕೊಂಡು ಹೋಗುತ್ತೇನೆ ಎಂಬ ಭರವಸೆ ನೀಡಿ ಅಯೋಧ್ಯೆಗೆ ಕರೆದುಕೊಂಡು ಹೋದ ಗಂಡನಿಂದ ವಿಚ್ಛೇದನ ಕೋರಿ ಮಧ್ಯಪ್ರದೇಶದ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

- Advertisement -


ವಿಚ್ಛೇದನ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದು, ಸದ್ಯ ದಂಪತಿಗಳು ಕೌನ್ಸಿಲಿಂಗ್ ಸೆಷನ್ ಗೆ ಒಳಗಾಗಿದ್ದಾರೆ ಎಂದು ಸಂಬಂಧ ಸಲಹೆಗಾರರಾದ ಶೈಲ್ ಅವಸ್ತಿ ಹೇಳಿದ್ದಾರೆ.


ಕಳೆದ ವರ್ಷ ಆಗಸ್ಟ್ ನಲ್ಲಿ ದಂಪತಿಗಳು ವಿವಾಹವಾಗಿದ್ದಾರೆ. ಗಂಡ ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗೋವಾ ಕರೆದುಕೊಂಡು ಹೋಗುತ್ತೇನೆ ಎಂದು ಪತ್ನಿಯ ಬಳಿ ಗಂಡ ಹೇಳಿದ್ದಾರೆ. ಗೋವಾ ಹೋಗಲು ತಯಾರಾಗಿದ್ದ ಪತ್ನಿಗೆ ಪ್ರವಾಸದ ಒಂದು ದಿನದ ಮೊದಲು, ತಾಯಿಯ ಇಚ್ಛೆಯಂತೆ ನಾವು ಅಯೋಧ್ಯೆಗೆ ಹೋಗಲಿದ್ದೇವೆ ಎಂದು ಪತ್ನಿ ಬಳಿ ಹೇಳಿದ್ದಾರೆ.
ಅಯೋಧ್ಯೆಗೆ ಹೋಗಿ ಬಂದ ಬಳಿಕ, ದಂಪತಿಗಳ ನಡುವೆ ಮನಸ್ತಾಪ ಹೆಚ್ಚಾಗಿದೆ. ಮೊದಲಿನಿಂದಲೂ ತನ್ನ ಕುಟುಂಬಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ಆರೋಪಿಸಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.



Join Whatsapp