ಪತ್ನಿಯನ್ನು ಚಾಕುವಿನಿಂದ ಇರಿದು ಕೊಂದ ಪತಿ

Prasthutha|

ಶಿವಮೊಗ್ಗ: ಗಂಡನೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ತುಂಗಾನಗರ ಠಾಣೆ ವ್ಯಾಪ್ತಿಯ ದುಮ್ಮಳ್ಳಿಯಲ್ಲಿ ನಡೆದಿದೆ.
ಮೃತ ಮಹಿಳೆಯನ್ನುದುಮ್ಮಳ್ಳಿ ನಿವಾಸಿ ಶೋಭಾ ಎಂದು ಗುರುತಿಸಲಾಗಿದೆ.

- Advertisement -


ಶೋಭಾ- ಪ್ರಕಾಶ್ ಇಬ್ಬರೂತಮ್ಮ ನಡುವಿನ ಮನಸ್ತಾಪದಿಂದಾಗಿ ಬೇರೆ ಬೇರೆ ಜೀವಿಸುತ್ತಿದ್ದರು ಎನ್ನಲಾಗಿದೆ. ಈ ಮಧ್ಯೆ ತನಗೆ ಗಂಡನಿಂದ ಕೊಲೆ ಬೆದರಿಕೆ ಇರುವುದಾಗಿ ಶೋಭಾ ದೂರು ಠಾಣೆಗೆ ನೀಡಿದ್ದರು ಎನ್ನಲಾಗಿದೆ.


ಶೋಭಾಳು ಹಾಲಿನ ಅಂಗಡಿ ನಡೆಸುತ್ತಿದ್ದು, ತನ್ನ ವಿರುದ್ದ ಕೊಟ್ಟ ದೂರು ವಾಪಸ್ ಪಡೆಯುವಂತೆ ಪತಿ ಪ್ರಕಾಶ್ ಆಕೆಯನ್ನು ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

- Advertisement -


ಈ ದಂಪತಿಯ ಪುತ್ರ ಕೆಲ ತಿಂಗಳ ಹಿಂದೆ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದು, ಇದರ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ತುಂಗಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Join Whatsapp