ಪತ್ನಿಯನ್ನು ಇರಿದು ಕೊಂದು ಮಗು ಮೇಲೂ ಹಲ್ಲೆ ನಡೆಸಿದ ಪತಿ

Prasthutha|

ಬೆಂಗಳೂರು: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಚಾಕುವಿನಿಂದ ಇರಿದು ನಿನ್ನೆ ಮಧ್ಯರಾತ್ರಿ ಭೀಕರವಾಗಿ ಕೊಲೆ ಮಾಡಿ ಮಗುವಿನ ಮೇಲೂ ಹಲ್ಲೆ ನಡೆಸಿರುವ ದಾರುಣ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯ ಸಾರಾಯಿ ಪಾಳ್ಯದಲ್ಲಿ ನಡೆದಿದೆ.

- Advertisement -


ಸಾರಾಯಿ ಪಾಳ್ಯದ ಆಫ್ಜಲ್ ಲೇಔಟ್ ನ ತಬ್ಸಿಮ್ ಬೇಬಿ (32) ಕೊಲೆಯಾದವರು. ಹಲ್ಲೆಗೊಳಗಾಗಿರುವ ಆಕೆಯ ಎರಡೂವರೆ ವರ್ಷದ ಮಗು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದೆ.


ಕೃತ್ಯ ನಡೆಸಿದ ಪತಿ ಕೋಲ್ಕತ್ತಾ ಮೂಲದ ಶೇಕ್ ಸುಹೈಲ್’ನನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಕಳೆದ 14 ವರ್ಷಗಳ ಹಿಂದೆ ಕೋಲ್ಕತ್ತಾ ಮೂಲದ ಶೇಕ್ ಸುಹೈಲ್ ಎಂಬಾತ ತಬ್ಸಿಮ್ ಬೇಬಿಯನ್ನು ವಿವಾಹವಾಗಿದ್ದು, ಕೆಲ ವರ್ಷಗಳ ಬಳಿಕ ಶೇಕ್ ಸುಹೈಲ್ ಪತ್ನಿಯ ಅಕ್ರಮ ಸಂಬಂಧ ವಿಚಾರ ತಿಳಿದು ಕೋಲ್ಕತ್ತಾಗೆ ಕರೆದುಕೊಂಡು ಹೋಗಿದ್ದ.

- Advertisement -


ಆದರೆ ಮತ್ತೆ ಪತಿಯನ್ನು ಬಿಟ್ಟು ಪ್ರಿಯಕರನ ಜೊತೆ ಇರಲು ಆಕೆ ಬೆಂಗಳೂರಿಗೆ ಬಂದಿದ್ದು ಆರು ವರ್ಷಗಳ ಬಳಿಕ ಬೆಂಗಳೂರಿಗೆ ಬಂದಿದ್ದ ಪತಿ ಶೇಕ್ ಸುಹೈಲ್ ಮಧ್ಯರಾತ್ರಿ 12.30ರ ವೇಳೆ ಮಾತನಾಡಬೇಕೆಂದು ತಬ್ಸಿಮ್ ಬೇಬಿಯನ್ನು ಭೇಟಿಯಾಗಿದ್ದನು. ಈ ವೇಳೆ ಮಾತಿಗೆ ಮಾತು ಬೆಳೆದು ತಬ್ಸಿಮ್ ಬೇಬಿಯನ್ನು ಕೊಲೆಗೈದಿದ್ದಾನೆ.
ಬಳಿಕ ತಬ್ಸಿಮ್ ಬೇಬಿ ಹಾಗೂ ಪ್ರಿಯಕರ ನಯೀಮ್’ಗೆ ಸೇರಿದ ಎರಡೂವರೆ ವರ್ಷದ ಮಗುವಿಗೂ ಗಾಯಗೊಳಿಸಿದ್ದಾನೆ. ಆರೋಪಿ ಸುಹೈಲ್’ನನ್ನು ಹೆಣ್ಣೂರು ಪೊಲೀಸರು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.

Join Whatsapp