ಮಾರಕಾಸ್ತ್ರಗಳಿಂದ ಕೊಚ್ಚಿ ಪತ್ನಿಯ ಕೊಂದು ಪತಿ ಪರಾರಿ

Prasthutha|

ಬೆಂಗಳೂರು: ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯನ್ನು ಕೊಲೆಗೈದ ಘಟನೆ ನೆಲಮಂಗಲ ತಾಲೂಕಿನ ಭೂಸಂದ್ರ ಗ್ರಾಮದ ಮನೆಯೊಂದರಲ್ಲಿ ನಡೆದಿದೆ.

- Advertisement -

ಭೂಸಂದ್ರದ ಶೃತಿ (29) ಕೊಲೆಯಾದ ದುರ್ದೈವಿ. ವರದಕ್ಷಿಣೆಗಾಗಿ ಪತಿಯೇ ಶೃತಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.

ಮದುವೆಯಾದ ಮೂರು ತಿಂಗಳ ನಂತರ ಪತ್ನಿಗೆ ಪತಿ ಕೃಷ್ಣಮೂರ್ತಿ ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು ತವರಿನಿಂದ ಹಣ ತೆಗೆದುಕೊಂಡು ಬಾರದ ಕಾರಣಕ್ಕೆ ದುಷ್ಕೃತ್ಯ ಎಸಗಿ ಪರಾರಿ ಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

Join Whatsapp