ಬೈಕ್ ಹಾರ್ನ್ ವಿಚಾರಕ್ಕೆ ಜಗಳ : ಬಿ.ಸಿ.ರೋಡಿನಲ್ಲಿ ಯುವಕನ ಬರ್ಬರ ಕೊಲೆ

Prasthutha|

ಮಂಗಳೂರು: ಬಿ.ಸಿ.ರೋಡಿನ ಶಾಂತಿ ಅಂಗಡಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ನಿನ್ನೆ ತಡರಾತ್ರಿ ಉಂಟಾದ ಮಾತಿನ ಚಕಮಕಿ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯಗೊಂಡಿದೆ.

- Advertisement -

ಬಿಸಿರೋಡಿನ‌ ಬಸ್ ಡಿಪೋ ಬಳಿ ಬೈಕ್ ಹಾರ್ನ್ ವಿಷಯದಲ್ಲಿ ಇತ್ತಂಡಗಳ ನಡುವೆ ವಾಗ್ವಾದ ಉಂಟಾಗಿದೆ ಎನ್ನಲಾಗಿದೆ. ಬಳಿಕ‌ ಜಗಳ ತಾರಕಕ್ಕೇರಿದ್ದು ಬಿಸಿರೋಡ್ ಶಾಂತಿ ಅಂಗಡಿ ನಿವಾಸಿ ಆಸಿಫ್ ಎಂಬವರನ್ನು ಚೂರಿ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಯುವಕನನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದರೂ ತೀವ್ರ ರಕ್ತಸ್ರಾವ ದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

- Advertisement -

ಬಿಸಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಮೃತ ಅಸೀಫ್ ಶಾಂತಿ ಅಂಗಡಿ ನಿವಾಸಿಯಾಗಿದ್ದು ಬಂದರು ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಮೃತ ಆಸಿಫ್ ಅವರಿಗೆ ಎರಡು ಸಣ್ಣ ಪ್ರಾಯದ ಗಂಡು ಮಕ್ಕಳಿದ್ದು, ಮೃತರು ತಮ್ಮ ಪತ್ನಿ, ತಂದೆ ತಾಯಿಯನ್ನು ಅಗಲಿದ್ದಾರೆ.

Join Whatsapp