ಸೋಮವಾರಪೇಟೆ : ಪಾಕ್ ವಿರುದ್ಧ ಸೋಲುಂಡ ಭಾರತ | ಹೃದಯಾಘಾತದಿಂದ ಅಭಿಮಾನಿ ಸಾವು

Prasthutha|

ಸೋಮವಾರಪೇಟೆ: ಆದಿತ್ಯವಾರ ನಡೆದ ಭಾರತ – ಪಾಕಿಸ್ತಾನ ಹೈವೋಲ್ಟೇಜ್ ಟಿ-20 ವಿಶ್ವಕಪ್ ಪಂದ್ಯಾಟದಲ್ಲಿ ಭಾರತ ಸೋಲುಂಡ ಪರಿಣಾಮ ಕ್ರೀಡಾಭಿಮಾನಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಗರದ ದೊಡ್ಡಮಳ್ತೆ ಗ್ರಾಮದಲ್ಲಿ ನಡೆದಿದೆ.

- Advertisement -


ಮೃತ ವ್ಯಕ್ತಿಯನ್ನು ಅಣ್ಣಯ್ಯ ಗೌಡ ಅವರ ಪುತ್ರ, ಹಿರಿಯ ಕ್ರಿಕೆಟಿಗ ಡಿ.ಎ. ಉದಯ (55) ಎಂದು ಗುರುತಿಸಲಾಗಿದೆ.
ಭಾನುವಾರ ರಾತ್ರಿ ಪಂದ್ಯದಲ್ಲಿ ಭಾರತ ಪರಾಜಯ ಗೊಂಡ ಹತ್ತು ನಿಮಿಷದಲ್ಲೇ ಉದಯ ಕುಸಿದು ಬಿದ್ದಿದ್ದು, ತಕ್ಷಣವೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟೊತ್ತಿಗೆ ಅವರು ಮೃತಪಟ್ಟಿದ್ದರು. ಕಾಫಿ ಬೆಳೆಗಾರರಾಗಿದ್ದ ಉದಯ ಓರ್ವ ಪುತ್ರ, ಪುತ್ರಿ ಮತ್ತು ಪತ್ನಿಯನ್ನು ಅಗಲಿದ್ದಾರೆ.

Join Whatsapp