ಮಳಲಿ‌ ಮಸೀದಿ ವಿವಾದ: ಪ್ರಕರಣದ ತೀರ್ಪು ಅಕ್ಟೋಬರ್17 ಕ್ಕೆ ಮುಂದೂಡಿಕೆ

Prasthutha|

ಮಂಗಳೂರು: ತಾಲೂಕಿನ ಮಳಲಿಪೇಟೆ ಮಸೀದಿ ನವೀಕರಣದ ಸಂದರ್ಭದಲ್ಲಿ ಸಂಘಪರಿವಾರದ ಕಾರ್ಯಕರ್ತರು ಮಸೀದಿ ದೇವಾಲಯದ ಮಾದರಿಯಲ್ಲಿದೆ ಎಂದು ವಿವಾದವೆಬ್ಬಿಸಿ ತನಿಖೆ ನಡೆಸಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಆ ಪ್ರಕರಣದ ತೀರ್ಪನ್ನು ನ್ಯಾಯಾಲಯ ಮುಂದೂಡಿಕೆ ಮಾಡಿದೆ.

- Advertisement -

ಧನಂಜಯ ಮತ್ತು ಮತ್ತಿತರ ಐವರು ಮಸೀದಿಯ ಕುರಿತಂತೆ ಹೂಡಿದ ದಾವೆ ವಿರುದ್ಧ ವಾದ ಮಂಡಿಸಿದ ವಕೀಲರು, ಮಸೀದಿ ವಕ್ಫ್ ಆಸ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ವಕ್ಫ್ ಸಂಬಂಧಿತ ನ್ಯಾಯಾಲಯದ ಪರಿಧಿಗೆ ಬರುತ್ತದೆ. ಹಾಗಾಗಿ ಮಸೀದಿ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬೇಕೆಂದು ಕೋರಿದರು.

ಈ ಕುರಿತು ವಾದ ಆಲಿಸಿದ್ದ ನ್ಯಾಯಾಲಯ ಸೆಪ್ಟೆಂಬರ್ 27ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ಆದರೆ, ಅಕ್ಟೋಬರ್ 17ಕ್ಕೆ ತೀರ್ಪು ಮುಂದೂಡಿದೆ.

Join Whatsapp