ಮಹಾರಾಷ್ಟ್ರ ಮುಖ್ಯಮಂತ್ರಿ ಶೀಘ್ರವೇ ಬದಲಾವಣೆ: ಆದಿತ್ಯ ಠಾಕ್ರೆ

Prasthutha|

ಮುಂಬೈ: ಮಹಾರಾಷ್ಟ್ರ ಸರ್ಕಾರದಲ್ಲಿ ದೊಡ್ಡ ಬದಲಾವಣೆಯಾಗಲಿದ್ದು, ಮುಖ್ಯಮಂತ್ರಿ ಏಕನಾಥ ಶಿಂದೆಯವರಿಗೆ ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ ಎಂದು ಶಿವಸೇನಾದ ಉದ್ಧವ್ ಠಾಕ್ರೆ ಬಣದ ಆದಿತ್ಯ ಠಾಕ್ರೆ ಹೇಳಿದ್ದಾರೆ.

- Advertisement -


ಅಜಿತ್ ಪವಾರ್ ನೇತೃತ್ವದ 8 ಮಂದಿ ಎನ್ಸಿಪಿ ಶಾಸಕರು ಸರ್ಕಾರಕ್ಕೆ ಬೆಂಬಲ ನೀಡಿ ಸಚಿವರಾಗುತ್ತಿದ್ದಂತೆಯೇ ಶಿಂದೆ ಅವರ ಮುಖ್ಯಮಂತ್ರಿ ಕುರ್ಚಿ ಅಪಾಯದಲ್ಲಿದೆ ಎಂದು ಅವರು ನುಡಿದಿದ್ದಾರೆ.


ರಾಜೀನಾಮೆ ನೀಡುವಂತೆ ಏಕನಾಥ ಶಿಂದೆ ಅವರಿಗೆ ಸೂಚಿಸಲಾಗಿದೆ ಎಂದು ನನಗೆ ಮಾಹಿತಿ ಇದೆ. ಸರ್ಕಾರದಲ್ಲಿಯೂ ಕೆಲ ಬದಲಾವಣೆಗಳು ಆಗಲಿವೆ ಎಂದು ಆದಿತ್ಯ ಹೇಳಿದ್ದಾರೆ.



Join Whatsapp