ನಾಗ್ಪುರದ ಬಾರ್‌ನಲ್ಲಿ ‘ಬೀಫ್’ ಆರ್ಡರ್ ಮಾಡಿದ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥನ ಪುತ್ರ..!

Prasthutha|

- Advertisement -

ಇದು ಬಿಜೆಪಿಯ ʼನಕಲಿ ಹಿಂದುತ್ವʼ ಎಂದ ಸಂಜಯ್ ರಾವುತ್

ಮುಂಬೈ: ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬಾವಂಕುಲೆಯವರ ಪುತ್ರ ಸಂಕೇತ್ ಬಾವಂಕುಲೆ ರವಿವಾರ ತನ್ನ ಸ್ನೇಹಿತನನ್ನು ಭೇಟಿಯಾಗಿದ್ದ ನಾಗ್ಪುರದ ಬಾರ್‌ನಲ್ಲಿ ಬೀಫ್ ಕಟ್ಲೆಟ್‌ಗೆ ಆರ್ಡರ್ ಮಾಡಿದ್ದಾರೆ ಎಂದು ಶಿವಸೇನೆ(ಯುಬಿಟಿ) ಸಂಸದ ಸಂಜಯ್ ರಾವುತ್ ಆರೋಪಿಸಿದ್ದಾರೆ.

- Advertisement -

ಅವರು ಇದು ಬಿಜೆಪಿಯ ’ನಕಲಿ ಹಿಂದುತ್ವ’ ಎಂದು ಟೀಕಿಸಿದ್ದಾರೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾವುತ್, ಬಿಜೆಪಿಯ ನಕಲಿ ಹಿಂದುತ್ವವನ್ನು ನೋಡಿ, ರವಿವಾರ ನಾಗ್ಪುರದ ಬಾರ್‌ಗೆ ಭೇಟಿ ನೀಡಿದ್ದ ಬಿಜೆಪಿ ನಾಯಕನ ಪುತ್ರ ಬೀಫ್ ಕಟ್ಲೆಟ್‌ಗೆ ಆರ್ಡರ್ ಮಾಡಿದ್ದ. ಇನ್ನೊಂದು ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದರೆ ಬಿಜೆಪಿ ಗುಂಪು ಹತ್ಯೆಗೆ ಮುಂದಾಗುತ್ತಿತ್ತು ಎಂದು ಆರೋಪಿಸಿದರು.



Join Whatsapp