ಬೆಳಗಾವಿ ವಿವಾದಕ್ಕಿಂತ ಮೊದಲು ಮಹದಾಯಿ ವಿವಾದ ಬಗೆಹರಿಯಲಿ: ಸಿ.ಎಂ. ಇಬ್ರಾಹಿಂ

Prasthutha|

ಬಾಗಲಕೋಟೆ: ಕರ್ನಾಟಕದಲ್ಲಿ ಮರಾಠಿಗರು ಆರಾಮವಾಗಿದ್ದಾರೆ, ಸರ್ಕಾರ ಬೆಳಗಾವಿಯ ವಿವಾದವನ್ನು ಸರಿಪಡಿಸುವ ಮೊದಲು ಮಹದಾಯಿ ವಿವಾದ ಬಗೆಹರಿಸಲು ಮುಂದಾಗಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.

- Advertisement -


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೊದಲು ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಜತೆ ಮಾತನಾಡಿ ಮಹದಾಯಿ ಬಗೆಹರಿಸಲಿ ಎಂದು ಹೇಳಿದರು.


ಅವರೆಲ್ಲ ಸೇರಿ ನಮ್ಮ ಬಾಯಲ್ಲಿ ಮಣ್ಣು ಹಾಕಲು ಹೊರಟಿದ್ದಾರೆ. ಕೆಲಸ ಮಾಡಲಿ, ಮಾಡದೇ ಇರಲಿ. 4 ತಿಂಗಳ ಬಳಿಕ ನಾವು ಅಮಿತ್ ಶಾಗೂ ಕೇಳಲ್ಲ, ಡೆಲ್ಲಿಗೂ ಕೇಳಲ್ಲ. ನಾವೇ ನಮ್ಮ ನಾಡು, ನಮ್ಮ ನೀರು, ನಮ್ಮ ಹಕ್ಕು ಅಂತ ಹೋರಾಡುತ್ತೇವೆ. ಅವರನ್ನು ಒದ್ದು ಹೊರಗೆ ಹಾಕಿ ನಾವೇ ಕೆಲಸ ಮಾಡುತ್ತೇವೆಂದು ಇಬ್ರಾಹಿಂ ಎಚ್ಚರಿಕೆ ನೀಡಿದರು.

Join Whatsapp