ಮಡಿಕೇರಿ: ಕೆಸಿಸಿ ಉಮ್ರಾ ಸರ್ವೀಸ್ ನ ನೂತನ ಕಚೇರಿ ಶುಭಾರಂಭ

Prasthutha|

ಮಡಿಕೇರಿ: ಕೆಸಿಸಿ ಟ್ರಸ್ಟ್ (ರಿ) ಇದರ ಕೆಸಿಸಿ ಉಮ್ರಾ ಸರ್ವೀಸ್ ನೂತನ ಕಚೇರಿ ಮಡಿಕೇರಿ ಮಹದೇವಪೇಟೆಯಲ್ಲಿ ಶುಕ್ರವಾರ ಶುಭಾರಂಭಗೊಂಡಿತು.

- Advertisement -

ಕಚೇರಿಯನ್ನು ಮಡಿಕೇರಿ ಬದ್ರಿಯಾ ಜುಮಾ ಮಸೀದಿ ಖತೀಬ್ ಫಝಲುರ್ರಹ್ಮಾನ್ ಸಖಾಫಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅರ್ಥಿಕವಾಗಿ ಹಿಂದುಳಿದ ಬಡ ಜನರಿಗೆ ನೆರವಾಗುವ ದೃಷ್ಟಿಯಿಂದ ಆರಂಭವಾದ ಕೆಸಿಸಿ ಉಮ್ರಾ ಯೋಜನೆ ಕೊಡಗು ಜಿಲ್ಲೆಗೂ ವ್ಯಾಪಿಸಿರುವುದು ಸಂತೋಷ ತಂದಿದೆ. ಈ ಯೋಜನೆಯ ಉಪಯೋಗವನ್ನು ಎಲ್ಲರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಮಡಿಕೇರಿ ಎನ್.ಎಂ.ಜುಮಾ ಮಸೀದಿ ಖತೀಬ್ ರಫೀಕ್ ಸಅದಿ, ಮಡಿಕೇರಿ ನಗರಸಭೆ ಸದಸ್ಯ ಮುಹ್ಸಿನ್  ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

- Advertisement -

ಕೆಸಿಸಿ ಟ್ರಸ್ಟ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಬ್ದುರ್ರಹ್ಮಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ತಿಂಗಳಿಗೆ 2000ರೂ. ಪಾವತಿಸಿ ಪವಿತ್ರ ಉಮ್ರಾ ನಿರ್ವಹಿಸುವ ನೂತನ ಯೋಜನೆ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಜಾಮೀಯಾ ಮಸೀದಿ ಖತೀಬ್, ಮಡಿಕೇರಿ ನಗರಸಭೆ ಸದಸ್ಯರಾದ ನೀರಜ್ ಅರ್ಶಾದ್, ಬಶೀರ್, ಮನ್ಸೂರ್, ಕೆಸಿಸಿ ಟ್ರಸ್ಟ್ ಸದಸ್ಯರಾದ ಅಲ್ತಾಫ್, ವಾಸಿಂ ಅಕ್ರಂ, ಇಬ್ರಾಹಿಂ ಖಲೀಲ್ ಮತ್ತಿತರರು ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 8884333630, 9483132020 ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.



Join Whatsapp