ಮಡಿಕೇರಿ: ಮುಂದುವರಿದ ಮಳೆ; ಬರೆ ಕುಸಿದು ಸಂಚಾರ ಅಸ್ತವ್ಯಸ್ತ

Prasthutha|

ಕೊಡಗು:  ನಿರಂತರ ಮಳೆ ಮುಂದುವರಿದಿರುವ  ಕಾರಣ ಜಿಲ್ಲಾದ್ಯಂತ  ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾರೀ ಮಳೆಯಿಂದ  ಮಡಿಕೇರಿ – ಚೆಟ್ಟಲ್ಲಿ ಕತ್ತೆಲೆಕಾಡು ಬಳಿ ಬರೆ ಕುಸಿದಿದ್ದು ಮರಗಳು ರಸ್ತೆಗೆ ಬಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.  ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.

- Advertisement -

ನಾಪೋಕ್ಲು – ಹೊದ್ದುರುಗೆ  ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತ ಗೊಂಡಿದೆ. ಜಿಲ್ಲೆಯ  ಜಲಪಾತಗಳು ಬೋರ್ಗರೆಯುತ್ತಿವೆ. ಮಡಿಕೇರಿ ಪ್ರಸಿದ್ಧ ಜಲಪಾತ ಅಬ್ಬಿ ಫಾಲ್ಸ್ ನ ಮನಮೋಹಕ ದೃಶ್ಯ  ಪ್ರವಾಸಿಗರ ಕಣ್ಮನ ತಣಿಸುವಂತಿದೆ.

ಸದ್ಯ ಮಳೆ ಆರ್ಭಟ ಮುಂದುವರಿದಿರುವುದರಿಂದ ರಜೆ ಘೋಷಿಸಿ ಜಿಲ್ಲಾಧಿಕಾರಿ  ಡಾ. ಬಿ.ಸಿ ಸತೀಶ್ ಆದೇಶ ಹೊರಡಿಸಿದ್ದಾರೆ. ಇಂದು ಕೊಡಗಿನ ಎಲ್ಲಾ ಅಂಗನವಾಡಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

Join Whatsapp