ಮಾದಕ ವಸ್ತು ವಿರುದ್ಧ ಅಭಿಯಾನ| ತಿರುವನಂತಪುರಕ್ಕೆ ಕಾಲ್ನಡಿಗೆ ಯಾತ್ರೆ ಹೊರಟ ಮಂಜೇಶ್ವರ ನಿವಾಸಿ

Prasthutha|

ಕಾಸರಗೋಡು: ಮಾದಕ ವಸ್ತು ಬಳಕೆ ವಿರುದ್ಧ ಹಾಗೂ ವಿಭಿನ್ನ ಸ೦ದೇಶಗಳೊಂದಿಗೆ ಕೇರಳದ ರಾಜಧಾನಿ ತಿರುವನಂತಪುರಕ್ಕೆ ಮಂಜೇಶ್ವರ ನಿವಾಸಿಯಾದ ಆಬ್ದುಲ್ ಹಮೀದ್ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದಾರೆ.

- Advertisement -

ಮಾದಕ ವ್ಯಸನಕ್ಕೆ ವಿದಾಯ ಹೇಳಿ, ಆತ್ಮಹತ್ಯೆ ಯಾವುದಕ್ಕೂ ಪರಿಹಾರವಲ್ಲ. ಪ್ರತಿ ಹನಿ ನೀರನ್ನು ಉಳಿಸಿ, ಆಹಾರವನ್ನು ವ್ಯರ್ಥ ಮಾಡಬೇಡಿ, ಸ್ವಚ್ಛತೆ ಕಾಪಾಡಿ ಎಂಬ ಮೊದಲಾದ ಸ೦ದೇಶಗಳೊಂದಿಗೆ ಹಮೀದ್‌ ಮಂಜೇಶ್ವರದಿಂದ ಕಾಲ್ನಡಿಗೆ ಯಾತ್ರೆ ಆರಂಭಿಸಿದ್ದಾರೆ.

ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಮಂಜೇಶ್ವರದಿಂದ ತಿರುವನಂತಪುರಕ್ಕೆ ಕಾಲ್ನಡಿಗೆ ಯಾತ್ರೆ ಹೊರಟ ಹಮೀದ್‌ ಅವರಿಗೆ ನಾಡಿನ ವಿವಿಧ ಸಂಘಟನೆಯ ನೇತಾರರು, ಸಾಮಾಜಿಕ ಕಾರ್ಯಕರ್ತರು ಹಾಗೂ ರಾಜಕೀಯ ಮುಂದಾಳುಗಳು ಶುಭ ಹಾರೈಸಿದರು.

Join Whatsapp