ಅರಣ್ಯ ಇಲಾಖೆಯ ಅಧಿಕಾರಿಗಳಿಂದ ಲಾಕಪ್ ಡೆತ್; ಹಲ್ಲೆಕೋರರನ್ನು ಬಂಧಿಸಲು ಆಗ್ರಹ

Prasthutha|

ಚಿಕ್ಕಮಗಳೂರು: ಶ್ರೀಗಂಧ ಕಳ್ಳತನ ನಡೆಸಿದ್ದ ಆರೋಪದಲ್ಲಿ ಬಂಧಿತನಾಗಿದ್ದ ವ್ಯಕ್ತಿಯ ಮೃತದೇಹವು ಅರಣ್ಯ ಇಲಾಖೆಯ ಆನೆ ಹಿಮ್ಮೆಟ್ಟಿಸುವ ಶಿಬಿರದಲ್ಲಿ ಪತ್ತೆಯಾಗಿದ್ದು, ತಾಲೂಕಿನ ಹೊಸಪೇಟೆ ಅರಣ್ಯ ಇಲಾಖೆಯ ಕಚೇರಿಯಲ್ಲಿ ಲಾಕಪ್ ಡೆತ್ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

- Advertisement -

ಕಲ್ಲೋಳ ಕೋಟೆಯ ಅರಣ್ಯ ಇಲಾಖೆಯ ಶಿಬಿರದ ಶೌಚಾಲಯದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹೊಸಪೇಟೆಯ ಫಾರೆಸ್ಟ್ ಕ್ವಾಟ್ರಸ್ ನಲ್ಲಿ ಲಾಕಪ್ ಡೆತ್ ಆದ ನಂತರ ಮೃತನ ಶವವನ್ನು ಶಿಬಿರದ ಶೌಚಾಲಯದ ಸಮೀಪ ತಂದಿಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ಧಾರೆ.

 ಈ ಬಗ್ಗೆ ಆಕ್ರೋಶಗೊಂಡು ಪ್ರತಿಭಟಿಸುತ್ತಿರುವ ಸಾರ್ವಜನಿಕರು ಫಾರೆಸ್ಟ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಬೇಕು ಎಂದು ಒತ್ತಾಯಿಸುತ್ತಿದ್ದು, ಕೊಲೆಮಾಡಿದ ಅಧಿಕಾರಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.



Join Whatsapp