ಎಸ್ ಟಿಪಿ, ಟಿಎಸ್ ಪಿ ಕಾಯ್ದೆಯ ಅನುಷ್ಠಾನದ ಕುರಿತು ದೇಶದೆಲ್ಲೆಡೆ ಚರ್ಚೆ ನಡೆಯಲಿ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಬಿಜೆಪಿ ಸರ್ಕಾರ ಎಸ್ ಸಿಪಿ/ ಟಿಎಸ್ ಪಿ ಕಾಯ್ದೆ ಪರ ಇದೆಯೇ ?ಎಂದು ಪ್ರಶ್ನಿಸಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಸ್ ಟಿಪಿ, ಟಿಎಸ್ ಪಿ ಕಾಯ್ದೆಯ ಅನುಷ್ಠಾನದ ಕುರಿತು ದೇಶದೆಲ್ಲೆಡೆ ಚರ್ಚೆ ಆಗಬೇಕು. ಎಂದು ಆಗ್ರಹಿಸಿದ್ದಾರೆ.

- Advertisement -

ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ (ದಸಂಸ ಒಕ್ಕೂಟ) ಬೆಂಗಳೂರಿನ ಲಿಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ “ಎಸ್ ಸಿ ಪಿ/ ಟಿ ಎಸ್ ಪಿ ಕಡ್ಡಾಯ ಅನುಷ್ಠಾನ” ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ನಾನು ಸಿಎಂ ಆಗಿದ್ದಾಗ 2 ಲಕ್ಷ 2 ಸಾವಿರ ಕೋಟಿ ಬಜೆಟ್ ಮಂಡಿಸಿದ್ದು, ಆಗ ಎಸ್ ಸಿಪಿ /ಟಿಎಸ್ ಪಿಗೆ ಇಟ್ಟಿದ್ದ ಹಣ 29ಸಾವಿರ ಕೋಟಿ ರೂ.ಆಗಿತ್ತು. ಈಗ ಬಜೆಟ್ ಗಾತ್ರ 2 ಲಕ್ಷ 47 ಸಾವಿರ 207 ಕೋಟಿ ಆದರೆ ಎಸ್ ಟಿಪಿ, ಟಿಎಸ್ ಪಿಗೆ ಇಟ್ಟ ಹಣ 26 ಸಾವಿರ ಕೋಟಿ ಮಾತ್ರ. ಬಿಜೆಪಿ ಸರ್ಕಾರ ಬರೀ ಕಾರ್ಪೊರೇಟ್ ಕಂಪನಿಗಳ ಪರ ನಿಂತಿದೆ. ಪರಿಶಿಷ್ಟರ ಕಲ್ಯಾಣದ ಪರವಾಗಿ ಇಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಅವರು ಹೇಳಿದರು. ಅಂಬೇಡ್ಕರ್ ರ ಮಾತುಗಳನ್ನು ಉಲ್ಲೇಖಿಸಿ ಮಾತನಾಡಿದ ಸಿದ್ದರಾಮಯ್ಯ, ಮತ ಹಾಕುವ ಸ್ವಾತಂತ್ರ್ಯ ಸಿಕ್ಕರೆ ಸಾಲದು. ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಆಗ ಮಾತ್ರ ಜಾತ್ಯತೀತ ಸಮಾಜ ನಿರ್ಮಾಣವಾಗುತ್ತದೆ.

 ನಮ್ಮ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಬೇಕು. ದೇಶದ ಸಂಪತ್ತು, ಶಿಕ್ಷಣ ಹಂಚಿಕೆಯಾಗಬೇಕು. ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕು ಅಂದ್ರೆ ಶಿಕ್ಷಣ ಮುಖ್ಯ ಎಂದು ಹೇಳಿದರು. ಇವ ನಮ್ಮವ, ನಮ್ಮ ಮನೆ ಮಗನೆಂದಿಣಸಯ್ಯ ಎಂಬ ಬಸವಣ್ಣನವರ ವಚನಗಳನ್ನು 800 ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ. ನಂತರ ಪಕ್ಕಕ್ಕೆ ಬಂದು ನೀನು ಯಾವ ಜಾತಿ ?ಮೇಲ್ ಜಾತಿಯಾ ಕೆಳ ಜಾತಿಯಾ ಎಂದು ಕೇಳ್ತಾರೆ. ನಮ್ಮಲ್ಲಿರುವ ಜಾತಿ ವ್ಯವಸ್ಥೆ, ಗುಲಾಮಗಿರಿ ಮನಸ್ಥಿತಿ ಹೋಗಬೇಕು. ಮೇಲ್ಜಾತಿಯವರು ಬಡವ ಆದರೂ ಗೌರವದಿಂದ ಮಾತನಾಡಿಸುತ್ತಾರೆ. ದಲಿತ ಶ್ರೀಮಂತನಾದರೂ ಅವರನ್ನು ಬೇರೆ ರೀತಿಯಲ್ಲೇ ಮಾತನಾಡಿಸುತ್ತಾರೆ. ಎಂದು ಹೇಳಿದರು. ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಮನೆ ಇಲ್ಲದ ದಲಿತರು ಅರ್ಜಿ ಹಾಕಿದಾಗ ಸೂರು ಕೊಡಬೇಕು ಎಂದು ನಾನು ಕಾನೂನು ಮಾಡಿದ್ದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು ಮೋದಿ ಹೇಳುತ್ತಾರೆ.

- Advertisement -

ಕಹಾ ಹೈ ಮೋದಿ ಸಬ್ ಕಾ ಸಾತ್ ಸಬ್ ಕಾ ವಿನಾಶ್ ಎಂದು ಪ್ರಧಾನಿಯನ್ನುವ್ಯಂಗ್ಯ ಮಾಡಿದರು. ಬಿಜೆಪಿ ಸರ್ಕಾರ, ಸಮ್ಮಿಶ್ರ ಸರ್ಕಾರ ಸೇರಿ ಅಧಿಕಾರಕ್ಕೆ ಬಂದು ಮೂರೂವರೆ ವರ್ಷ ಆಯಿತು. ಬಜೆಟ್ ಈಗ ಏನ್ ಮಾಡ್ತಾರೊ ಗೊತ್ತಿಲ್ಲ. ಎಲ್ಲಾದಕ್ಕೂ ದುಡ್ಡು ಇಲ್ಲ ಎನ್ನುತ್ತಾರೆ. ಏನೇ ಕೇಳಿದರೂ ಕೋವಿಡ್ ಅಂತಾರೆ. ಕೋವಿಡ್ ಗೆ ಖರ್ಚಾಗಿದ್ದು 8 ಸಾವಿರ ಕೋಟಿ ಮಾತ್ರ. ಕೇಂದ್ರ ಸರ್ಕಾರದಿಂದ ಬರುವ ಹಣಕಾಸು ನೆರವಿನ ಪ್ರಮಾಣ ಕಡಿಮೆ ಆಗ್ತಿದೆ. ಮೋದಿ ಬಂದ ಮೇಲೆ ಹೀಗಾಗ್ತಿದೆ. ರಾಜ್ಯದಿಂದ ಮೂರು ಲಕ್ಷ ಕೋಟಿ ತೆರಿಗೆ ಸಂಗ್ರಹ ಆಗುತ್ತಿದೆ. ಅನುದಾನ ಸೇರಿ ಮೊದಲು ನಮಗೆ ಕೇಂದ್ರದ ಪಾಲು 80 ಸಾವಿರ ಕೋಟಿ ಬರ್ತಿತ್ತು. ಈಗ 40 ಸಾವಿರ ಕೋಟಿ ಮಾತ್ರ ಬರುತ್ತಿದೆ. ಕೇಂದ್ರದಿಂದ ಹಣ ತರದೆ ಇಲ್ಲಿ ಕೋವಿಡ್ ಕಾರಣ ಹೇಳ್ತಾರೆ. ನಮಗೆ ಕೇಂದ್ರದಿಂದ ಸರಿ ಸುಮಾರು 1ಲಕ್ಷ 20 ಸಾವಿರ ಕೋಟಿ ಬರಬೇಕು. ಮುಖ್ಯಮಂತ್ರಿ, ಮಂತ್ರಿಗಳು, ಸಂಸದರು ಪ್ರಧಾನಿಯವರನ್ನು ಕೇಳದೇ ಹೆದರಿಕೊಂಡು ಹೇಡಿಗಳ ತರ ಕುಳಿತಿದ್ದಾರೆ ಎಂದು ಟೀಕಿಸಿದರು.



Join Whatsapp