’ಪೂಜ್ಯ ಅಪ್ಪಾಜಿಯೂ ಜೈಲಿಗೆ ಹೋಗಲಿ’ : ಸ್ವಪಕ್ಷದ ನಾಯಕರ ವಿರುದ್ದ ಯತ್ನಾಳ್ ಗುಡುಗು

Prasthutha|

ಬೆಂಗಳೂರು: ಯಡಿಯೂರಪ್ಪ ಅವರ ಕಾಲದ ಹಗರಣಗಳು ಹೊರಗೆ ಬರಲಿ. ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೂ ಅವರ ನಿಜ ಬಣ್ಣ ಬಯಲಾಗಲಿ. ಪೂಜ್ಯ ಅಪ್ಪಾಜಿಯವರು, ಪೂಜ್ಯ ತಂದೆಯವರು ಎಂದು ತಿಳಿದುಕೊಳ್ಳುವವರಿಗೆ ಇವರ ಅಸಲಿ ರೂಪ ಗೊತ್ತಾಗಲಿ ಎಂದು ಸ್ವಪಕ್ಷ ನಾಯಕರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

- Advertisement -


ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮೈಸೂರು ಪಾದಯಾತ್ರೆ ಎನ್ನುವುದು ಬರೀ ನಾಟಕ, ಬರೀ ಆಟ. ಇವರು, ಇವರ ಅಪ್ಪ ಎಷ್ಟು ಆಸ್ತಿ ಮಾಡಿದ್ದಾರೆ ಎನ್ನುವುದು ಗೊತ್ತಾಗಲಿ. ಮುಖ್ಯಮಂತ್ರಿಗಳ ಮಗನ ದಾಖಲೆಯೂ ಇದೆ. ಎಲ್ಲರೂ ಜೈಲಿಗೆ ಹೋದರೆ ಹೋಗಲಿ, ನ್ಯಾಯ ಕೊಡಿಸುವುದಕ್ಕೆ ನಾನಿದ್ದೇನೆ ಎಂದು ಯತ್ನಾಳ್ ಹೇಳಿದ್ದಾರೆ.


“ಮುಡಾ ಅಕ್ರಮದಲ್ಲಿ ಯಾರು ತಪ್ಪು ಮಾಡಿದ್ದಾರೋ ಅವರ ಸತ್ಯವೆಲ್ಲವೂ ರಾಜ್ಯದ ಜನತೆಗೆ ತಿಳಿಯಬೇಕು. ಯಡಿಯೂರಪ್ಪ, ಬೊಮ್ಮಾಯಿ, ಶೆಟ್ಟರ್, ಸದಾನಂದ ಗೌಡ, ಕುಮಾರಸ್ವಾಮಿ ಅವಧಿಯಲ್ಲಿ ತಪ್ಪಾಗಿದ್ದರೂ ಅದು ಕೂಡಾ ತಪ್ಪೇ” ಎಂದು ಹೇಳಿದರು.

- Advertisement -


“ಸದನದಲ್ಲಿ ಮುಡಾ ಅಕ್ರಮ ಬಗ್ಗೆ ಏಕೆ ಚರ್ಚೆಗೆ ಸಿಎಂ ಸಿದ್ದರಾಮಯ್ಯ ಸಿದ್ದರಿಲ್ಲ? ಸಿದ್ದರಾಮಯ್ಯ ಪಲಾಯನ ಮಾಡುತ್ತಿದ್ದಾರೆ. ವಾಲ್ಮೀಕಿ ಮತ್ತು ಮುಡಾ ಹಗರಣ ಸಿದ್ದರಾಮಯ್ಯನವರ ಅನುಮತಿ ಇಲ್ಲದೆ ಆಗಲು ಸಾಧ್ಯವಿಲ್ಲ. ಮುಡಾ ಹಗರಣದಲ್ಲಿ ಸಿಎಂ ತಲೆ ಎತ್ತಿ ಓಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದರು.



Join Whatsapp