ಬೈಕ್ ಸವಾರನ ಮೇಲೆ ಚಿರತೆ ದಾಳಿ!

Prasthutha|

►ಕೊನೆಗೂ ಚಿರತೆ ಸೆರೆ

- Advertisement -

ಮೈಸೂರು: ಜಿಲ್ಲೆಯ ಕೃಷ್ಣರಾಜನಗರದಲ್ಲಿ ಚಿರತೆಯೊಂದು ಬೈಕ್ ಸವಾರ ಸೇರಿ ಕೆಲವರ ದಾಳಿ ಮಾಡಿ ಘಟನೆ ನಡೆದಿದ್ದು, ಗ್ರಾಮಸ್ಥರು ಆತಂಕಿತರಾಗಿದ್ದಾರೆ.


ಮೈಸೂರಿನ ಕೆ.ಆರ್.ನಗರದ ವಸತಿ ಬಡಾವಣೆಗೆ ಚಿರತೆಯೊಂದು ಆಗಮಿಸಿ ಎಲ್ಲೆಂದರೆಲ್ಲಿ ಓಡಾಡಿದೆ. ಚಿರತೆ ಕಂಡ ನಿವಾಸಿಗಳು ಕಂಗಾಲಾಗಿ ಭಯಭೀತರಾಗಿದ್ದಾರೆ. ಅಲ್ಲದೆ ಈ ದೃಶ್ಯ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.

- Advertisement -


ವೀಡಿಯೋದಲ್ಲಿ ಚಿರತೆ ಮೊದಲು ವಸತಿ ಬಡಾವಣೆಗೆ ನುಗ್ಗಿ ಬಳಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ದ್ವಿಚಕ್ರ ಸವಾರನ ಮೇಲೆ ದಾಳಿಮಾಡಿದೆ. ಘಟನೆಯ ಪರಿಣಾಮ ಇಬ್ಬರಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿರತೆಯನ್ನು ಅರಣ್ಯ ಅಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಚಿರತೆಯನ್ನು ಸೆರೆಹಿಡಿದ್ದಾರೆ.

Join Whatsapp