ನೇಹಾ ಕೊಲೆ ಪ್ರಕರಣದಲ್ಲಿ ರಾಜಕೀಯ ಮಾಡಿದ ನಾಯಕರು ಮೀನಾಳ ಮನೆಗೆ ಭೇಟಿ ನೀಡಿ: ಅಬ್ದುಲ್ ಮಜೀದ್

Prasthutha|

ಬೆಂಗಳೂರು: ನೇಹಾ ಕೊಲೆ ಪ್ರಕರಣದಲ್ಲಿ ರಾಜಕೀಯ ಮಾಡಿದ ನಾಯಕರು ಮೀನಾಳ ಮನೆಗೆ ಭೇಟಿ ಕೊಟ್ಟು, ನ್ಯಾಯ ಒದಗಿಸಿ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಸೂರ್ಲಬ್ಬಿ ಗ್ರಾಮದ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪಾಸಾದ ಏಕೈಕ ವಿದ್ಯಾರ್ಥಿನಿ ಮೀನಾ, ಫಲಿತಾಂಶದ ಖುಷಿಯಲ್ಲಿರುವಾಗಲೇ, ತನ್ನ ಪ್ರೇಮಿ ವಿರೂಪಾಕ್ಷನಿಂದ ಕೊಲೆಯಾಗಿದ್ದಾಳೆ. ಈ ಬರ್ಬರ ಘಟನೆಯನ್ನು ಖಂಡಿಸುತ್ತೇನೆ. ಆರೋಪಿಯನ್ನು ತಕ್ಷಣ ಬಂಧಿಸುವಂತೆ ಕೊಡಗು ಎಸ್ಪಿಯವರಲ್ಲಿ ಆಗ್ರಹಿಸುತ್ತೇನೆ. ನೇಹಾ ಕೊಲೆ ಪ್ರಕರಣದಲ್ಲಿ ಓಡೋಡಿ ಬಂದು ರಾಜಕೀಯ ಮಾಡಿದ ಬಿಜೆಪಿಯ ನಾಯಕರಾದ ಅಮಿತಾ ಶಾ, ಜೆ ಪಿ ನಡ್ಡಾ, ಯಡಿಯೂರಪ್ಪ ಮತ್ತು ಕಾಂಗ್ರೆಸ್ ನಾಯಕರಾದ ಸುರ್ಜೇವಾಲ, ಸಿದ್ದರಾಮಯ್ಯ ಮುಂತಾದವರು ತಕ್ಷಣ ಮೀನಾಳ ಮನೆಗೆ ಭೇಟಿ ಕೊಟ್ಟು, ನ್ಯಾಯ ಒದಗಿಸಬೇಕೆಂದು ಆಗ್ರಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Join Whatsapp