ಮೂಸೆವಾಲಾ ಹತ್ಯೆಯನ್ನು ನಮ್ಮವರೇ ಮಾಡಿದ್ದಾರೆ ಎಂದ ಗ್ಯಾಂಗ್’ಸ್ಟರ್ ಬಿಷ್ಣೋಯ್

Prasthutha|

ನವದೆಹಲಿ: ಖ್ಯಾತ ಗಾಯಕ ಸಿಧು ಮೂಸೆವಾಲಾ ಅವರನ್ನು ನಮ್ಮವರೇ ಹತ್ಯೆ ನಡೆಸಿದ್ದಾರೆ ಎಂದು ಗ್ಯಾಂಗ್’ಸ್ಟರ್ ಲಾರೆನ್ಸ್ ಬಿಷ್ಣೋಯ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

- Advertisement -

ಮೇ 29 ರಂದು ಮೂಸೆವಾಲಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗುಂಡಿಕ್ಕಿ ಹತ್ಯೆ ನಡೆಸಲಾಗಿತ್ತು. ಮರಣೋತ್ತರ ಪರೀಕ್ಷೆಯ ವೇಳೆ ಬರೋಬ್ಬರಿ 19 ಗುಂಡು ದೇಹದೊಳಗೆ ಹೊಕ್ಕಿರುವುದು ಬಹಿರಂಗವಾಗಿತ್ತು.

ಮಹಾರಾಷ್ಟದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಲಾರೆನ್ಸ್ ಬಿಷ್ಣೋಯ್ ತಿಹಾರ್ ಜೈಲಿನಲ್ಲಿದ್ದು, ಈ ಕೃತ್ಯವನ್ನು ನಮ್ಮವರೇ ಮಾಡಿದ್ದು, ಜೈಲಿನಲ್ಲಿರುವುದರಿಂದ ನಾನು ನೇರವಾಗಿ ಕೊಲೆಯಲ್ಲಿ ಭಾಗಿಯಾಗಿಲ್ಲ ಎಂಬುದನ್ನು ಅಧಿಕಾರಿಗಳ ಬಳಿ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

ಮಹಾರಾಷ್ಟದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಲಾರೆನ್ಸ್ ಬಿಷ್ಣೋಯ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ.

ಈತನ ವಿರುದ್ಧ ದೆಹಲಿ, ಹರ್ಯಾಣ, ರಾಜಸ್ಥಾನ ಮತ್ತು ಪಂಜಾಬ್ ನಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿವೆ. ಈ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಹತ್ಯೆ ನಡೆಸುವುದಾಗಿ ಬಿಷ್ಣೋಯ್ ಧಮ್ಕಿ ಹಾಕಿದ್ದನು.



Join Whatsapp