‘ಕಾನೂನು ಎಲ್ಲರಿಗೂ ಒಂದೇ’: ಮುರುಘಾ ಶರಣರ ಬಂಧನಕ್ಕೆ ಎಚ್. ವಿಶ್ವನಾಥ್ ಆಗ್ರಹ

Prasthutha|

ಮೈಸೂರು: ಪೊಕ್ಸೊ ಪ್ರಕರಣ ದಾಖಲಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ವಿಧಾನ‌ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಾಗಿ ಎರಡು ದಿನವಾದರೂ ಬಂಧನವಾಗಿಲ್ಲ. ಜನ ಪ್ರತಿನಿಧಿಗಳು ಈ ವಿಚಾರವಾಗಿ ಹಸ್ತಕ್ಷೇಪ ನಡೆಸುವುದು ಸರಿಯಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ಯಾರದೋ ಒತ್ತಡಕ್ಕೆ ಮಣಿದು ಬಂಧನ ವಿಳಂಬ ಮಾಡುತ್ತಿದ್ದಾರೆ. ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ ವಿಶ್ವನಾಥ್, ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.

- Advertisement -

ಸದ್ಯ ಶರಣರ ಮೇಲೆ ಆರೋಪ ಇರುವುದರಿಂದ ಅವರು ಪೀಠ ತ್ಯಜಿಸಲಿ. ಆರೋಪಗಳಿಂದ ಮುಕ್ತವಾದ ಬಳಿಕ ಬೇಕಿದ್ದಲ್ಲಿ ಮತ್ತೆ ಪೀಠ ಅಲಂಕರಿಸಲಿ ಎಂದು ಅವರು ಹೇಳಿದರು.



Join Whatsapp