ಲಖಿಂಪುರ ಖೇರಿ ಹಿಂಸಾಚಾರ । ರಾಜ್ಯಾದ್ಯಂತ ಬಂದ್ ಗೆ ಮಹಾ ವಿಕಾಸ ಅಘಾಡಿ ಕರೆ

Prasthutha|

ಲಕ್ನೋ: “ಮಹಾ ವಿಕಾಸ್ ಅಘಾಡಿ” ವೇದಿಕೆ ವತಿಯಿಂದ ಅಕ್ಟೋಬರ್ 11 ರಂದು ಮಹಾರಾಷ್ಟ್ರರಾಜ್ಯಾದ್ಯಂತ ಬಂದ್ ನಡೆಸಲಾಗುವುದೆಂದು ಮಹಾರಾಷ್ಟ್ರದ ಎಸ್.ಸಿ.ಪಿ ನಾಯಕ, ಸಚಿವ ಜಯಂತ್ ಪಾಟೀಲ್ ತಿಳಿಸಿದ್ದಾರೆ.

- Advertisement -

ಇತ್ತೀಚೆಗೆ ಉತ್ತರಪ್ರದೇಶದ ಲಖಿಂಪುರದ ಖೇರಿಯಲ್ಲಿ ರೈತರ ವಿರುದ್ಧ ನಡೆದ ಹಿಂಸಾಚಾರದ ವಿರುದ್ಧ ಎನ್.ಸಿ.ಪಿ, ಕಾಂಗ್ರೆಸ್ ಮತ್ತು ಶಿವಸೇನೆ ಮೈತ್ರಿಯಿಂದ ಮಹಾ ವಿಕಾಸ್ ಅಘಾಡಿ ಮೂಲಕ ಮಹಾರಾಷ್ಟ್ರ ರಾಜ್ಯವ್ಯಾಪ್ತಿ ಬಂದ್ ನಡೆಸಲಾಗುವುದು ಎಂದು ಜಯಂತ್ ಪಾಟೀಲ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈ ಮಧ್ಯೆ ಪಾಟೀಲ್ ಅವರು ವಿಧಾನ ಸಭೆಯಲ್ಲಿ ಮೃತ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ನಿರ್ಣಯವನ್ನು ಮಂಡಿಸಿದರು. ಇದಕ್ಕೆ ಕಂದಾಯ ಸಚಿವ ಬಾಳಾಸಾಹೇಬ್ ತೋರತ್ ಮತ್ತು ಕೈಗಾರಿಕ ಸಚಿವ ಸುಭಾಸ್ ದೇಸಾಯಿ ಅವರು ಬೆಂಬಲ ಸೂಚಿಸಿದ್ದರು.

Join Whatsapp