ಉಳ್ಳಾಲ ತಲುಪಿದ ಕೂರ ತಂಙಲ್ ಪಾರ್ಥಿವ ಶರೀರ: ಅಂತಿಮ ದರ್ಶನಕ್ಕೆ ಜನಸಾಗರ

Prasthutha|

ಉಳ್ಳಾಲ: ಇಂದು ಬೆಳಿಗ್ಗೆ ಕೇರಳದ ಎಟ್ಟಿಕುಳಂನಲ್ಲಿ ನಿಧನರಾದ ಉಳ್ಳಾಲ ಖಾಝಿ ಫಝಲ್ ಕೋಯಮ್ಮ ಕೂರ ತಂಙಳ್ ಅವರ ಪಾರ್ಥಿವ ಶರೀರ ಉಳ್ಳಾಲ ದರ್ಗಾ ವಠಾದಲ್ಲಿದ್ದು, ಸಹಸ್ರಾರು ಜನರು ಅಂತಿಮ ದರ್ಶನಕ್ಕೆ ಸೇರಿದ್ದಾರೆ.

- Advertisement -

ಉಳ್ಳಾಲದಲ್ಲಿ ಅಂತಿಮ‌ ದರ್ಶನದ ಬಳಿಕ ಕೂರ ತಂಙಳ್ ಅವರ ಕರ್ಮಭೂಮಿಯಾದ ಕಡಬ ತಾಲೂಕಿನ ಕೂರ ಪ್ರದೇಶಕ್ಕೆ ಪಾರ್ಥಿವ ಶರೀರ ರವಾನೆಯಾಗಲಿದೆ. ಕೂರ ಮಸೀದಿ ವಠಾರದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.

ಉಳ್ಳಾಲ‌ ಖಾಝಿ ಹಾಗೂ ಹಲವು ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದ ಕೂರ ತಂಙಳ್ ಅವರ ನಿಧನವು ಅವರನ್ನು ಪ್ರೀತಿಸುವ ಅಪಾರ ಜನರನ್ನು ದಿಗ್ಭ್ರಮೆಗೊಳಿಸಿದೆ. ಆರೋಗ್ಯವಾಗಿಯೇ ಇದ್ದು, ನಿನ್ನೆ ರಾತ್ರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಫಝಲ್ ಕೋಯಮ್ಮ ಕೂರ ತಂಙಳ್, ಇಂದು ಅಪರಾಹ್ನ ಉಳ್ಳಾಲದಲ್ಲಿ ನಡೆಯಲಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದರು. ಆದರೆ ಇಂದು ಬೆಳಿಗ್ಗೆ ಹಠಾತ್ತನೆ ಹೃದಯಸ್ತಂಭನಕ್ಕೀಡಾಗಿ ತಂಙಳ್ ನಿಧನರಾಗಿದ್ದಾರೆ.



Join Whatsapp