ಸೆಕ್ಸ್ CD ಹಗರಣ | ಜಾರಕಿಹೊಳಿ ಅಮಾಯಕ : ಕುಮಾರಸ್ವಾಮಿ

Prasthutha|

ಬೆಂಗಳೂರು : ಸೆಕ್ಸ್ CD ಹಗರಣದಲ್ಲಿ ರಮೇಶ್ ಜಾರಕಿಹೊಳಿ ಅಮಾಯಕರು. ಬಿಜೆಪಿಯವರು ಬಾಂಬೆಗೆ ಶಾಸಕರನ್ನು ಕರೆದುಕೊಂಡು ಹೋದ್ರು. ಯಾರ್ ಯಾರ್ ಬಗ್ಗೆ ಏನೇನು ಷಡ್ಯಂತ್ರ ಮಾಡಿದ್ದಾರೋ ನನಗೆ ಗೊತ್ತಿಲ್ಲ. 2, 3, 4 ಜನರ ಬಗ್ಗೆ ಜಾರಕಿಹೊಳಿಯೇ ಹೇಳಬೇಕು ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

- Advertisement -

ಈ ಕುರಿತಂತೆ ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡು-ಹೆಣ್ಣಿನ ಸಂಪರ್ಕ, ಸಂಘರ್ಷ ಇಂದಿನದ್ದಲ್ಲ. ರಾಮಾಯಣ, ಮಹಾಭಾರತ ನಡೆದಿದ್ದು ಏಕೆ? ಆ ಕಾಲದಿಂದಲೂ ಇವೆಲ್ಲಾ ನಡೆಯುತ್ತಲೇ ಇವೆ. ಮನುಷ್ಯ ತಪ್ಪು ಮಾಡೋದು ಸಹಜ. ಆದ್ರೇ ಎಚ್ಚರಿಕೆಯಿಂದ ಇರಬೇಕು ಎಂದರು.

2 + 3 + 4 ಸೂತ್ರದ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಬಾಲಚಂದ್ರರನ್ನೇ ಕೇಳಬೇಕು. 2 ಅಂದ್ರೇ ಫ್ಲೈಟ್ ನಲ್ಲಿ ಕರೆದುಕೊಂಡು ಹೋದವರಾ.? 3 ಅಂದ್ರೇ ಬಾಂಬೆಯಲ್ಲಿ ನೋಡಿಕೊಂಡವರಾ.? 4 ಅಂದ್ರೆ ಬಾಂಬೆಯಿಂದ ಕರೆದುಕೊಂಡು ಬಂದವರಾ.? ಎಂಬುದಾಗಿ ಕುಮಾರ ಸ್ವಾಮಿ ಹೇಳಿದ್ದಾರೆ.

- Advertisement -

6 ಸಚಿವರು ಕೋರ್ಟ್ ಗೆ ಹೋಗಿದ್ದಾರೆ. ಇವರಿಗೆ ಈ ಐಡಿಯಾ ಕೊಟ್ಟವರು ಯಾರು? ಜನ ಇವರ ಬಗ್ಗೆ ಏನಂದುಕೊಳ್ಳಬೇಕು. ಇಂಥದನ್ನು ನೋಡಲು ನನ್ನ ಸರ್ಕಾರ ಬೀಳಿಸಬೇಕಿತ್ತಾ? ಎಂಬುದಾಗಿ ಪ್ರಶ್ನಿಸಿದ್ದಾರೆ.

Join Whatsapp