ಕುಮಾರಸ್ವಾಮಿ ಸಿಎಂ ಆದರೆ ಮೊದಲು ಖುಷಿ ಪಡೋನು ನಾನೇ : ಬಿಜೆಪಿ ಶಾಸಕ

Prasthutha|

ತುಮಕೂರು: ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾದರೆ ಮೊದಲು ಖುಷಿ ಪಡೋನು ನಾನೇ ಎಂದು ಬಿಜೆಪಿ ಎಂಎಲ್ಸಿ ಎಂ.ಚಿದಾನಂದ್ ಗೌಡ ಹೇಳಿದ್ದಾರೆ.

- Advertisement -

ತುಮಕೂರಿನ ಹುಲಿಕುಂಟೆ ಗ್ರಾಮದಲ್ಲಿ ನಡೆದ ಕುಂಚಿಟಿಗ-ಒಕ್ಕಲಿಗ ಸಮಾವೇಶದಲ್ಲಿ ಎಂ.ಚಿದಾನಂದ್ ಗೌಡ ಎಚ್.ಡಿ.ಕುಮಾರಸ್ವಾಮಿ ಮತ್ತು ನಂಜಾವಧೂತ ಸ್ವಾಮೀಜಿ ಅವರೊಂದಿಗೆ ವೇದಿಕೆ ಹಂಚಿಕೊಂಡರು.

ಈ ಸಮಯದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕುಮಾರಣ್ಣ ಮುಂದಿನ ಮುಖ್ಯಮಂತ್ರಿಯಾದರೆ, ಸಂತೋಷ ಪಡೋದ್ರಲ್ಲಿ ನಾನೂ ಕೂಡ ಒಬ್ಬ. ಅಲ್ಲದೆ, ನಮ್ಮ ಸಮುದಾಯವನ್ನು (ಕುಂಚಿಟಿಗ) ಕೇಂದ್ರದ ಇತರ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಸೇರಿಸಬೇಕು ಎಂದು ಹೇಳಿದರು.

- Advertisement -

ಅಲ್ಲದೆ, ಯಾರೇ ಮುಖ್ಯಮಂತ್ರಿಯಾದರೂ ಕುಂಚಿಟಿಗ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಹೇಳಿದರು.



Join Whatsapp