ಸಂಸದ ನಳಿನ್ ಕುಮಾರ್ ಸಲಿಂಗಕಾಮಿ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್

Prasthutha|

ಬೆಂಗಳೂರು: ಬಿಜೆಪಿ ನಾಯಕರ ಕುರಿತಾಗಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತಾಡಿರುವ ವೀಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಾದ್ಯಂತ ತುಂಬಾ ವೈರಲ್ ಆಗುತ್ತಿದೆ.

- Advertisement -

ಕಮಲ ನಾಯಕರ ಕಾಮ ಪುರಾಣದ ಬಗ್ಗೆ ಮಾತಾಡಿದ ಲಕ್ಷ್ಮಣ್, ಬಿಜೆಪಿ ನಾಯಕರೆಲ್ಲರೂ ಚಾರಿತ್ರ್ಯ  ಭ್ರಷ್ಟರು ಎಂದು ಹೇಳಿದ್ದಾರೆ. ನಮ್ಮ ರಾಜ್ಯದ 13 ಜನ ಬಿಜೆಪಿ ನಾಯಕರು ಜಾಮೀನು ಮೇಲೆ ಹೊರಗಿದ್ದು, ಅವರೆಲ್ಲರೂ ಲೈಂಗಿಕ ದೌರ್ಜನ್ಯ ಕೇಸ್ ನ ಆರೋಪಿಗಳು ಎಂದು ಹೇಳಿದ್ದಾರೆ.

2009 ರಲ್ಲಿ ರೇಣುಕಾಚಾರ್ಯ ನರ್ಸ್ ಕೇಸ್, 2012 ರಲ್ಲಿ ಹಾಲಪ್ಪ, ಸಿಸಿ ಪಾಟೀಲ್ ಮತ್ತು ಲಕ್ಷ್ಮಣ್ ಸವದಿ, 2013 ರಲ್ಲಿ ರಘುಪತಿ ಭಟ್ ಪತ್ನಿಯ ಮರ್ಡರ್ ಕೇಸ್ ,2014 ರಲ್ಲಿ ರಾಮ್ ದಾಸ್, 2019 ರಲ್ಲಿ ಕಳಕಪ್ಪ ಬಂಡಿ ಮತ್ತು ಪ್ರತಾಪ್ ಸಿಂಹ, 2021 ರಲ್ಲಿ ರಮೇಶ್ ಜಾರಕಿಹೊಳಿ ಮುಂತಾದವರೆಲ್ಲರೂ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಭಾಗಿಯಾಗಿರುವವರು ಎಂದು ಹೇಳಿದ್ದಾರೆ.

- Advertisement -

ಅರವಿಂದ್ ಲಿಂಬಾವಳಿ, ಬಸವಣಗೌಡ ಯತ್ನಾಳ್ ಬಿಜೆಪಿಯಲ್ಲಿರುವ ಇಬ್ಬರು ಸಲಿಂಗಕಾಮಿಗಳು ಎಂದು ಹೇಳಿದ ಲಕ್ಷ್ಮಣ್, ಸಂಸದ ನಳಿನ್ ಕುಮಾರ್ ಸಲಿಂಗಕಾಮ ಜೊತೆಗೆ ಲೈಂಗಿಕ ದೌರ್ಜನ್ಯ  ಈ ಎರಡೂ ಕೇಸ್ ನಲ್ಲಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.

Join Whatsapp