ಮಂಗಳೂರು: ಆಸ್ಪತ್ರೆ ಶುಲ್ಕ ರದ್ದು ವಿರೋಧಿಸಿ ಕೊರಗ ಜನಾಂಗದಿಂದ ಪ್ರತಿಭಟನಾ ಮೆರವಣಿಗೆ

Prasthutha|

ಮಂಗಳೂರು: ಬುಡಕಟ್ಟು ಅತಿ ಹಿಂದುಳಿದ ಕೊರಗ ಜನಾಂಗದವರ ಆಸ್ಪತ್ರೆ ಶುಲ್ಕ ಪಾವತಿಯನ್ನು ರದ್ದು ಪಡಿಸಿರುವುದನ್ನು ಪ್ರತಿಭಟಿಸಿ ನೂರಾರು ಕೊರಗ ಜನಾಂಗದವರು ಮಂಗಳವಾರ ಡಾ. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

- Advertisement -


ಕೊರಗ ಜನಾಂಗದ ಮುಖಂಡ ಸುಂದರ ಅವರ ನಾಯಕತ್ವದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಮಹಾತ್ಮಾ ಗಾಂಧೀಜಿ, ಗೋಕುಲ್ ದಾಸ್, ಕುದ್ಮುಲ್ ಫೋಟೋಗಳಿಗೆ ಹೂ ಮಾಲಾರ್ಪಣೆ ಬಳಿಕ ಮೆರವಣಿಗೆ ಆರಂಭವಾಯಿತು. ಮನವಿ ಸಲ್ಲಿಸುವುದರೊಂದಿಗೆ ಘೋಷಣೆ ಇಲ್ಲದ ಪ್ರತಿಭಟನಾ ಮೆರವಣಿಗೆ ಕೊನೆಗೊಂಡಿತು.

- Advertisement -


ವೆನ್ ಲಾಕ್ ಆಸ್ಪತ್ರೆ ಪ್ರಮುಖರಿಗೆ ಮನವಿಯ ಪ್ರತಿಯನ್ನು ಸಲ್ಲಿಸಲಾಯಿತು. ಮುಖಂಡರಾದ ಶಶಿಕಲಾ ಕೋಡಿಕಲ್, ರಮೇಶ್ ಎಡಪದವು, ಕೊಗ್ಗ ಕೋಡಿಕಲ್, ಗೌರಿ ಕೆಂಜೂರು, ಬಾಬು ಪಾಂಗಾಳ, ಚಂದ್ರಾವತಿ ಉಜಿರೆ, ಕಿರಣ್ ಗುಂಡಾವು ಮತ್ತಿತರರು ಪಾಲ್ಗೊಂಡಿದ್ದರು.

Join Whatsapp