ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ತಿರುಚಿದ ಪತ್ರಕರ್ತನನ್ನು ಹೊರಹಾಕಿದ ಕೊಡಗು ಪತ್ರಕರ್ತರ ಸಂಘ

Prasthutha|

ಮಡಿಕೇರಿ: ಅಂಬೇಡ್ಕರ್ ಜಿಂದಾಬಾದ್ ಎಂಬ ಘೋಷಣೆಯನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪದಲ್ಲಿ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಪತ್ರಕರ್ತ ಹರೀಶ್ ಕುಮಾರ್ ಎಂಬಾತನನ್ನು ಕೊಡಗು ಜಿಲ್ಲಾ ಪತ್ರಕರ್ತರ ಸಂಘದಿಂದ ಹೊರಹಾಕಲಾಗಿದೆ.

- Advertisement -


ಜಿಲ್ಲಾ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಶನಿವಾರಸಂತೆಯ ಹರೀಶ್ ಕುಮಾರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾದ ಕಾರಣ ಸಂಘದ ಆಡಳಿತ ಮಂಡಳಿಯ ತುರ್ತು ಸಭೆ ಕರೆದು ಈ ತೀರ್ಮಾನ ಕೈಗೊಂಡಿದೆ. ಸದಸ್ಯತ್ವ ರದ್ದುಪಡಿಸುವ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಹರೀಶ್ ಕುಮಾರ್ ತಮ್ಮ ರಾಜೀನಾಮೆಯನ್ನು ಸಂಘಕ್ಕೆ ಸಲ್ಲಿಸಿದರು. ತಕ್ಷಣ ಸಭೆ ರಾಜೀನಾಮೆಯನ್ನು ಅಂಗೀಕರಿಸಿದೆ.


ಸಭೆಯಲ್ಲಿ ಹರೀಶ್ ಕುಮಾರ್ ಅವರು ನೀಡಿದ್ದ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಅದೇ ಮಾನದಂಡದ ಆಧಾರದಲ್ಲಿ ಪತ್ರಕರ್ತ ಅಝೀಝ್ ಅವರ ಸದಸ್ಯತ್ವ ರದ್ದು ಪಡಿಸಲಾಗಿದೆ. ಸಭೆಯ ನಿರ್ಣಯವನ್ನು ಈ ಕೂಡಲೇ ರಾಜ್ಯ ಸಂಘಕ್ಕೆ ರವಾನಿಸಲಾಗುತ್ತಿದೆ. ಇಬ್ಬರು ದೋಷಮುಕ್ತವಾದ ನಂತರ ಸಂಘದ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸಂಘದ ಮೂಲಗಳು ತಿಳಿಸಿವೆ.

- Advertisement -

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp