ಉಪ್ಪಿನಂಗಡಿಯಲ್ಲಿ ಮತ್ತೆ ಚೂರಿ ಇರಿತ : ಮೂವರು ಆಸ್ಪತ್ರೆಗೆ ದಾಖಲು

Prasthutha|

ಉಪ್ಪಿನಂಗಡಿ : ನಿನ್ನೆಯಷ್ಟೇ ಸಂಘಪರಿವಾರದ ಕಾರ್ಯಕರ್ತರಿಂದ ತಲವಾರು ದಾಳಿ ನಡೆದ ಉಪ್ಪಿನಂಗಡಿಯಲ್ಲಿ ಇಂದು ಮತ್ತೆ ಮೂವರ ಮೇಲೆ ಚೂರಿ ಇರಿತದ ಘಟನೆ ವರದಿಯಾಗಿದೆ. ಉಪ್ಪಿನಂಗಡಿ ಹಳೆಗೇಟು ಬಳಿ ಇರುವ  ಸುಬ್ರಹ್ಮಣ್ಯ ಕ್ರಾಸ್ ಬಳಿ ಇರುವ ಅಂಗಡಿಯೊಂದರ ಸಮೀಪದಲ್ಲಿ ನಿಂತಿದ್ದ ಮೂವರ ಮೇಲೆ ಚೂರಿ ಇರಿತ ನಡೆದಿದೆ ಎಂದು ಮೂಲಗಳು ತಿಳಿಸಿದೆ.

- Advertisement -

ಗಾಯಗೊಂಡ ಯುವಕರಲ್ಲಿ ಓರ್ವನನ್ನು ಗುರುತಿಸಲಾಗಿದ್ದು, ಹಿಂದೂ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಕಜೆಕಾರು ನಿವಾಸಿ ಅಶೋಕ್ ಶೆಟ್ಟಿ ಎಂದು ತಿಳಿದು ಬಂದಿದೆ. ಅಶೋಕ್ ಶೆಟ್ಟಿ ಮೀನಿನ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಅಶೋಕ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಾಳಿ ಮಾಡಿದ ತಂಡ ಮುಸುಕು ಧರಿಸಿ ಬಂದಿತ್ತು ಎನ್ನಲಾಗಿದೆ.

Join Whatsapp