ಜೈಲಿನಲ್ಲಿ ದರ್ಶನ್​ಗೆ ಮೊಬೈಲ್ ರವಾನೆ ಮಾಡಿದ್ದ ಕಿಂಗ್​ ಪಿನ್​​​ ಬಂಧನ.!

Prasthutha|

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ರಾಜಾತಿಥ್ಯ ಕೇಸ್​ ಬಳಿಕ ಸೆಂಟ್ರಲ್ ಜೈಲ್​ನಲ್ಲಿ 26 ಮೊಬೈಲ್​ಗಳು ಪತ್ತೆಯಾಗಿದ್ದವು. ಅವುಗಳ ಜಾಡು ಹಿಡಿದ ಹೊರಟ ಪೊಲೀಸರು ಇದೀಗ ಕೊನೆಗೂ ಜೈಲ್​ನಲ್ಲಿ ಮೊಬೈಲ್​ ರವಾನೆ ಮಾಡುತ್ತಿದ್ದ ಖೈದಿಯನ್ನು ಲಾಕ್​ ಮಾಡಿದ್ದಾರೆ.

- Advertisement -

ಹ್ಯಾಂಡ್ರಾಯ್ಡ್ ಮೊಬೈಲ್​​ಗಳ ಅಂಗಡಿ ಜೈಲಲ್ಲಿ ಇಟ್ಟುಕೊಂಡು, 80 ರಿಂದ 90 ಸಾವಿರ ರೂಪಾಯಿಗೆ ಖೈದಿ ಮೊಬೈಲ್​ಗಳನ್ನ ಮಾರಾಟ ಮಾಡುತ್ತಿದ್ದ. ಕೆಜಿಎಫ್ ಮೂಲದ ವಿಜಯ್ ಎಂಬಾತನಿಂದ ಮೊಬೈಲ್​ ಮಾರಾಟ ಮಾಡುತ್ತಿದ್ದ.

ಮರ್ಡರ್ ಕೇಸ್​ನಲ್ಲಿ ಜೈಲಲ್ಲಿರುವ ಖೈದಿ ವಿಜಯ್​​, ಜೈಲಾಧಿಕಾರಿಗಳ ಸಹಾಯದಿಂದಲೇ ಮೊಬೈಲ್​ಗಳನ್ನು ಮಾರಾಟ ಮಾಡುತ್ತಿದ್ದ. ರೌಡಿ ಶೀಟರ್​ಗಳು ಸಾವಿರಾರು ಹಣ ಕೊಟ್ಟು ಖರೀದಿ ಮಾಡುತ್ತಿದ್ದರು ಎನ್ನಲಾಗಿದೆ.

- Advertisement -

ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ಪಡೆದ ಕಾರಣದಿಂದಲೇ ದರ್ಶನ್ ಆ್ಯಂಡ್ ಗ್ಯಾಂಗ್ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ.



Join Whatsapp