ಕೇರೆ ಹಾವನ್ನು ನುಂಗಿದ ಕಾಳಿಂಗ ಸರ್ಪ; ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟ ಸ್ನೇಕ್ ಪ್ರಕಾಶ್

Prasthutha|

ಬೆಳ್ತಂಗಡಿ: ತಾಲೂಕಿನ ನಿಡ್ಲೆ ಸಮೀಪ ಮನೆಯೊಂದರ ಕೊಟ್ಟಿಗೆಯ ಸಮೀಪ ಕೇರೆ ಹಾವನ್ನು ಭಾರೀ ಗಾತ್ರದ ಕಾಳಿಂಗ ಸರ್ಪವೊಂದು ನುಂಗಿದ್ದು, ಧರ್ಮಸ್ಥಳದ ಸ್ನೇಕ್ ಪ್ರಕಾಶ್ ಅವರು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

- Advertisement -


ನಿಡ್ಲೆ ಗ್ರಾಮದ ಬೂಡುಜಾಲು ನಿವಾಸಿ ಆದರ್ಶ ರಾವ್ ಎಂಬವರ ಮನೆಯ ಸಮೀಪ ಕಾಳಿಂಗ ಸರ್ಪ ಕೇರೆ ಹಾವನ್ನು ನುಂಗುತ್ತಿರುವುದನ್ನು ನೋಡಿದ ಮನೆಯವರು ಕೂಡಲೇ ಸ್ನೇಕ್ ಪ್ರಕಾಶ್ ಅವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪ್ರಕಾಶ್ ಅವರು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.


ಪ್ರಕಾಶ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದ ಧರ್ಮಸ್ಥಳ ಗ್ರಾಮದ ಸಂಯೋಜಕರಾಗಿದ್ದು ಹಾವುಗಳನ್ನು ಹಿಡಿಯುವುದರಲ್ಲಿ ನಿಪುಣರಾಗಿದ್ದಾರೆ.



Join Whatsapp