ರೋಗ ಗುಣಪಡಿಸುತ್ತೇನೆಂದು ಯುವತಿಯನ್ನು ಸರಪಳಿಯಿಂದ ಹೊಡೆದು ಕೊಂದ ಮಂತ್ರವಾದಿ!

Prasthutha|

ಸೂರತ್: ರೋಗ ಗುಣಪಡಿಸುತ್ತೇನೆಂದು ಮಂತ್ರವಾದಿಯೊಬ್ಬ ಬಿಸಿ ಕಬ್ಬಿಣದ ಸರಪಳಿಯಿಂದ 25 ವರ್ಷದ ಯುವತಿಯನ್ನು ಹೊಡೆದು ಕೊಂದ ದಾರುಣ ಘಟನೆ ಗುಜರಾತ್ ನ ದ್ವಾರಕಾ ಜಿಲ್ಲೆಯ ದೇವಭೂಮಿಯಲ್ಲಿ ನಡೆದ

- Advertisement -

ಕೊಲೆಗೀಡಾದ ಯುವತಿಯನ್ನು ರಮಿಳಾ ಸೋಲಂಕಿ ಎಂದು ಗುರುತಿಸಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಮಂತ್ರವಾದಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಗಂಡನೊಂದಿಗೆ ನವರಾತ್ರಿ ಆಚರಿಸಲು ಹೋಗಿದ್ದ ಯುವತಿ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದಳು.
ಈ ವೇಳೆ ಯುವತಿಯ ದೇಹಕ್ಕೆ ಬಾಧಿಸರುವುದನ್ನು ನಿವಾರಿಸಿಕೊಡುವುದಾಗಿ ಮಂತ್ರವಾದಿ ರಮೇಶ್ ಸೋಲಂಕಿ ಕುಟುಂಬಕ್ಕೆ ಮನವರಿಕೆ ಮಾಡಿಕೊಡುತ್ತಾರೆ.

- Advertisement -

ಅಲ್ಲಿದ್ದವರಿಗೆ ಯುವತಿಯನ್ನು ಥಳಿಸುವಂತೆ ಮಂತ್ರವಾದಿ ಹೇಳಿದ್ದಾನೆ. ನಂತರ ಯುವತಿಯ ಕುಟುಂಬಿಕರು ಬಿಸಿ ಕಬ್ಬಿಣದ ಸರಪಳಿಯಿಂದ ಥಳಿಸಿದ್ದು, ಹಲ್ಲೆಗೊಳಗಾದ ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ‘ಟೈಮ್ಸ್ ನೌ’ ವರದಿ ಮಾಡಿದೆ.

ಯುವತಿಯ ಪತಿ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮಂತ್ರವಾದಿ ರಮೇಶ್ ಸೋಲಂಕಿ ಸೇರಿದಂತೆ ವೆರ್ಸಿ ಸೋಲಂಕಿ, ಭವೇಶ್ ಸೋಲಂಕಿ, ಅರ್ಜುನ್ ಸೋಲಂಕಿ ಮತ್ತು ಮನು ಸೋಲಂಕಿ ಅವರನ್ನು ಬಂಧಿಸಲಾಗಿದೆ.

Join Whatsapp