ಅರ್ಹತೆಯುಳ್ಳ ಒಬ್ಬ ಮಹಿಳೆಯೂ ರಾಜ್ಯಪಾಲರ ಹುದ್ದೆಗೆ ಸಿಕ್ಕಿಲ್ಲವೇ? : ಅಸಮಾಧಾನ ಹೊರ ಹಾಕಿದ ಬಿಜೆಪಿ ನಾಯಕಿ ಖುಷ್ಬೂ

Prasthutha|

ಚೆನ್ನೈ: ರಾಜ್ಯಪಾಲ ಸ್ಥಾನಕ್ಕೆ ಅರ್ಹತೆಯುಳ್ಳ ಮಹಿಳೆ ಯಾವ ರಾಜ್ಯದಲ್ಲೂ ನಿಮಗೆ ಸಿಕ್ಕಿಲ್ಲವೇ? ಎಂದು ಬಿಜೆಪಿ ನಾಯಕಿ ಖುಶ್ಬೂ ಪ್ರಶ್ನಿಸಿದ್ದಾರೆ. ಹೊಸ ರಾಜ್ಯಪಾಲರ ನೇಮಕಾತಿ ನಡೆದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಬಿಜೆಪಿ ನಾಯಕಿ ರಾಷ್ಟ್ರಪತಿಯವರಿಗೆ ಈ ಪ್ರಶ್ನೆಯನ್ನು ಕೇಳಿದ್ದಾರೆ.

- Advertisement -

ಇತ್ತೀಚೆಗೆ ಆಯ್ಕೆಯಾದ ರಾಜ್ಯಪಾಲರ ಪಟ್ಟಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡ ಅವರು, ”ಮಾನ್ಯ ರಾಷ್ಟ್ರಪತಿಯವರೇ, ರಾಜ್ಯಪಾಲ ಸ್ಥಾನಕ್ಕೆ ಅರ್ಹತೆಯುಳ್ಳ ಮಹಿಳೆ ಯಾವ ರಾಜ್ಯದಲ್ಲೂ ನಿಮಗೆ ಸಿಕ್ಕಿಲ್ಲವೇ? ಯಾಕೆ ತಾರತಮ್ಯ ಮಾಡುತ್ತಿದ್ದೀರಿ? ಇದು ನನಗೆ ತುಂಬಾ ನೋವನ್ನುಂಟು ಮಾಡಿದೆ” ಎಂದಿದ್ದಾರೆ.

ಕಾಂಗ್ರೆಸ್​ ಪಕ್ಷದಲ್ಲಿದ್ದ ಪಂಚಭಾಷಾ ನಟಿ ಖುಷ್ಬೂ ಸುಂದರ್ ಈ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

Join Whatsapp