ಚಿನ್ನ ಕಳ್ಳಸಾಗಣೆ ಹಗರಣ| ಕೇರಳದ ಸ್ವಪ್ನಾ ಸುರೇಶ್‌ಗೆ ಜಾಮೀನು

Prasthutha|

ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಯುಎಪಿಎ ಕಾಯ್ದೆಯಡಿ ಬಂಧಿತಳಾಗಿದ್ದ ಕೇರಳದ ಸ್ವಪ್ನಾ ಸುರೇಶ್‌ಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

- Advertisement -

ಬಂಧನಕ್ಕೊಳಗಾಗಿ ಒಂದು ವರ್ಷದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗುತ್ತಿರುವ ಸ್ವಪ್ನಾ, ಇಂದು(ಮಂಗಳವಾರ) ಜೈಲಿನಿಂದ ಹೊರಬರುವ ಸುಳಿವು ಸಿಕ್ಕಿದೆ. ಜಾಮೀನು ಲಭಿಸಿದ ಏಳು ಆರೋಪಿಗಳ ಪೈಕಿ ಸಪ್ನಾ ಮಾತ್ರ ಇಂದು ಬಿಡುಗಡೆಯಾಗಬಹುದು.
ಸಪ್ನಾ ಮೇಲೆ ಹೇರಲಾಗಿದ್ದ ಕೊಫೆಪೋಸಾವನ್ನು ಹೈಕೋರ್ಟ್ ನಿನ್ನೆ ರದ್ದುಗೊಳಿಸಿತ್ತು. ಈ ಹಿಂದೆ ಕಸ್ಟಮ್ಸ್ ಮತ್ತು ಈಡಿ ಪ್ರಕರಣಗಳಲ್ಲಿ ಸಪ್ನಾ ಜಾಮೀನು ಪಡೆದಿದ್ದರು.

ಆದರೆ, ಸ್ವಪ್ನಾ ಜೊತೆ ಜಾಮೀನು ಪಡೆದ ಉಳಿದ ಏಳು ಆರೋಪಿಗಳ ಕೊಫೆಪೋಸಾ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸ್ವಪ್ನಾ ಹೊರತುಪಡಿಸಿ ಉಳಿದವರಿಗೆ ಇಂದು ಬಿಡುಗಡೆ ಸಾಧ್ಯವಿಲ್ಲ ಎಂದು ತಿಳಿದುಬಂದಿದೆ.

Join Whatsapp