ಸಂಜಿತ್‌ ಕೊಲೆ ಪ್ರಕರಣದ ತನಿಖೆ ಸಿಬಿಐಗೆ ಒಪ್ಪಿಸಲು ಕೇರಳ ಹೈಕೋರ್ಟ್ ನಕಾರ

Prasthutha|

ಕೊಚ್ಚಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಸಂಜಿತ್‌ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿದೆ. ಪ್ರಕರಣದ ವಿಚಾರಣೆಯನ್ನು ಇತ್ತೀಚೆಗೆ ನಡೆಸಿದ ನ್ಯಾ. ಹರಿಪಾಲ್ ಅವರು ಎಸ್ ಡಿಪಿಐ ಹಾಗೂ ಪಿಎಫ್ ಐ ಸಂಘಟನೆಗಳನ್ನು ತೀವ್ರಗಾಮಿ ಸಂಘಟನೆಗಳು ಎಂದು ಉಲ್ಲೇಖಿಸಿದ್ದು, ಈ ಸಂಘಟನೆಗಳ ಸದಸ್ಯರ ಹೆಸರುಗಳು ಹಿಂಸಾಚಾರದ ಘಟನೆಗಳಲ್ಲಿ ಕೇಳಿಬರುತ್ತವೆ. ಆದರೆ ಈ ಸಂಘಟನೆಗಳು ನಿಷೇಧಿತ ಸಂಘಟನೆಗಳಲ್ಲ ಎಂದಿದ್ದಾರೆ.

- Advertisement -


ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತು ಸಲ್ಲಿಸಲಾಗಿದ್ದ ಅರ್ಜಿಗೆ ನಕಾರಾತ್ಮಕವಾಗಿ ಉತ್ತರಿಸಿರುವ ನ್ಯಾಯಮೂರ್ತಿಗಳು, ಅದರ ಅಗತ್ಯವಿಲ್ಲ ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ (ಆರ್ ಎಸ್ ಎಸ್ ಕಾರ್ಯಕರ್ತನ ಹತ್ಯೆ) ಸಂಘಟನೆಯ ರಾಜ್ಯ ಅಥವಾ ರಾಷ್ಟ್ರ ಮಟ್ಟದ ನಾಯಕರ ಪಾತ್ರವನ್ನು ತನಿಖಾಧಿಕಾರಿಯು ಅಲ್ಲಗಳೆದಿದ್ದಾರೆ. 90 ದಿನದ ಒಳಗೆ ತನಿಖೆಯ ಅಂತಿಮ ವರದಿ ಸಲ್ಲಿಕೆ ಮಾಡಿರುವುದು ಅವರ ವಿಶ್ವಾಸಾರ್ಹತೆ ಮತ್ತು ಪ್ರಾಮಾಣಿಕತೆಯನ್ನು ಸೂಚಿಸುತ್ತದೆ,” ಎಂದು ಅವರು ಅಭಿಪ್ರಾಯಪಟ್ಟರು.


ಮುಂದುವರೆದು ನ್ಯಾಯಾಲಯವು ಆರ್ ಎಸ್ ಎಸ್ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಎಸ್ ಡಿಪಿಐ ಹಾಗೂ ಪಿಎಫ್ ಐ ಸದಸ್ಯರ ಕೈವಾಡವಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಎರಡೂ ಸಂಘಟನೆಗಳ ನಡುವೆ ಸುದೀರ್ಘ ತಿಕ್ಕಾಟವಿದೆ ಎಂದು ಹೇಳಿದೆ.

Join Whatsapp