ಶೋಕಾಸ್ ನೋಟಿಸ್ ಗೆ ಉತ್ತರಿಸಲು ಕುಲಪತಿಗಳಿಗೆ ಹೆಚ್ಚಿನ ಸಮಯ ನೀಡಿದ ಕೇರಳ ಹೈಕೋರ್ಟ್

Prasthutha|

ತಿರುವನಂತಪುರಂ: ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ತಮ್ಮ ಪದಚ್ಯುತಿಗಾಗಿ ರಾಜ್ಯಪಾಲರು ನೀಡಿದ ಶೋಕಾಸ್ ನೋಟಿಸ್ ಗಳಿಗೆ ಉತ್ತರಿಸಲು ಕೇರಳ ಹೈಕೋರ್ಟ್ ನವೆಂಬರ್ 7 ರವರೆಗೆ ಕಾಲಾವಕಾಶ ನೀಡಿದೆ.

- Advertisement -

ನ್ಯಾಯಮೂರ್ತಿ ದೇವನ್ ರಾಮಚಂದ್ರನ್ ಅವರಿದ್ದ ಏಕ ಸದಸ್ಯ ಪೀಠವು ಈ ಆದೇಶ ನೀಡಿದ್ದು, ಸದರಿ ಸಲ್ಲಿಕೆಯನ್ನು ಗಮನದಲ್ಲಿಟ್ಟುಕೊಂಡು, ಕುಲಪತಿಗಳಿಗೆ ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸಮಯ ನೀಡಬೇಕು ಎಂದು ಆದೇಶದಲ್ಲಿ ಹೇಳಿದೆ. ಅದರಂತೆ ನ್ಯಾಯಾಲಯವು ದಿನಾಂಕವನ್ನು ನವೆಂಬರ್ 7ರ ಸಂಜೆ 5 ಗಂಟೆಯವರೆಗೆ ವಿಸ್ತರಿಸಿತು.

ಈ ಪ್ರಕರಣವನ್ನು ನ್ಯಾಯಾಲಯವು ನವೆಂಬರ್ 8ರಂದು ಪರಿಗಣಿಸಲಿದೆ. ಶೋಕಾಸ್ ನೋಟಿಸ್ ಗಳಿಗೆ ವಿವರಣೆ ನೀಡುವ ಬಗ್ಗೆ ನವೆಂಬರ್ 3 ಮತ್ತು 4ರಂದು ಸಂಜೆ 5 ಗಂಟೆಗೆ ಛಾನ್ಸಲರ್ ಗಡುವನ್ನು ನಿಗದಿಪಡಿಸಿದ್ದರು.

Join Whatsapp