ವಿಸಿಗಳ ನಂತರ ರಾಜ್ಯ ಹಣಕಾಸು ಸಚಿವರನ್ನು ತೆಗೆದು ಹಾಕಲು ಮನವಿ ಮಾಡಿದ ಕೇರಳ ರಾಜ್ಯಪಾಲ

Prasthutha|

ತಿರುವನಂತಪುರಂ: ಕೇರಳದಲ್ಲಿ ರಾಜ್ಯಪಾಲರ ಮತ್ತು ಸರ್ಕಾರದ ನಡುವಿನ ತಿಕ್ಕಾಟ ಮತ್ತಷ್ಟು ತೀವ್ರಗೊಂಡಿದೆ. ವಿಸಿಗಳ ರಾಜೀನಾಮೆಗೆ ಒತ್ತಾಯಿಸಿದ ನಂತರ ಇದೀಗ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಿತ್ತ ಸಚಿವ ಕೆ.ಎನ್.ಬಾಲಗೋಪಾಲ್ ಅವರ ರಾಜೀನಾಮೆಗೆ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್  ಒತ್ತಾಯಿಸಿದ್ದಾರೆ. 

- Advertisement -

ಬುಧವಾರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ಆರಿಫ್ ಮೊಹಮ್ಮದ್ ಖಾನ್ , ಪ್ರಮಾಣ ವಚನದ ಉಲ್ಲಂಘನೆಗಾಗಿ ಬಾಲಗೋಪಾಲ್ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ಸಚಿವರಿಂದ ಯಾವುದೇ ಸಂವಿಧಾನ ವಿರೋಧಿ ಹೇಳಿಕೆ ಇಲ್ಲ . ಆದ್ದರಿಂದ, ಅವರನ್ನು ಸಂಪುಟದಿಂದ ತೆಗೆದುಹಾಕುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ರಾಜ್ಯಪಾಲರಿಗೆ ಉತ್ತರ ಕಳುಹಿಸಿದ್ದಾರೆ ಅಧಿಕೃತ ಮೂಲಗಳು ತಿಳಿಸಿವೆ.

Join Whatsapp