ಕೇರಳ | ನರಬಲಿ ನೀಡಿದ ಬಳಿಕ ನರಭಕ್ಷಣೆ: ಶಂಕೆ ವ್ಯಕ್ತಪಡಿಸಿದ ಪೊಲೀಸರು

Prasthutha|

ಕೊಚ್ಚಿ: ಆರ್ಥಿಕ ಯೋಗಕ್ಷೇಮಕ್ಕಾಗಿ ಮಾಟ ಮಂತ್ರಕ್ಕೆ ಇಬ್ಬರು ಮಹಿಳೆಯರನ್ನು ಹತ್ಯೆಗೈದು, ದೇಹಗಳನ್ನು ತುಂಡರಿಸಿ ನರಬಲಿ ನೀಡಿದ ಘಟನೆಯೊಂದು ಇತ್ತೀಚೆಗೆ ಕೇರಳದಲ್ಲಿ ಸುದ್ದಿಯಾಗಿತ್ತು. ಇದೀಗ ಈ ಕುರಿತು ಅಚ್ಚರಿ ಮಾಹಿತಿಯೊಂದು ಲಭಿಸಿದೆ.

- Advertisement -

ನರಬಲಿಗೆ ಬಲಿಪಶುಗಳಾದ ಇಬ್ಬರು ಮಹಿಳೆಯರ ಕಳೇಬರವನ್ನು ಭಕ್ಷಿಸಿದ ಸಂಗತಿಯೊಂದು ಬೆಳಕಿಗೆ ಬಂದಿದೆ. ಮನುಷ್ಯರ ಮಾಂಸವನ್ನು ತಿಂದರೆ ಸದಾ ಯೌವನ, ಹುಮ್ಮಸ್ಸು ಕೂಡಿರುತ್ತದೆ ಎಂದು ಮಾಂತ್ರಿಕ ಹೇಳಿದ ಕಾರಣ ನರಬಲಿ ನೀಡಿದ ದೇಹಗಳನ್ನು ತುಂಡರಿಸಿ ಮಾಂಸವನ್ನು ಬೇಯಿಸಿ ಭಕ್ಷಿಸಿರುವ ಮತ್ತು ರಕ್ತವನ್ನು ಕುಡಿದಿರುವ ಬೀಭತ್ಸ ಘಟನೆಗೆ ಸಾಕ್ಷರತಾ ರಾಜ್ಯ, ದೇವರ ನಾಡು ಕೇರಳ ಸಾಕ್ಷಿಯಾಗಿದೆ.

ಮಾಂಸ ಸೇವಿಸಿರುವ ಮತ್ತು ರಕ್ತ ಕುಡಿದಿರುವ ಶಂಕೆಯನ್ನು ಕೊಚ್ಚಿ ನಗರ ಪೊಲೀಸ್ ಆಯುಕ್ತ ಸಿ ಎಚ್ ನಾಗರಾಜ್ ವ್ಯಕ್ತಪಡಿಸಿದ್ದಾರೆ. ಇಬ್ಬರು ಮಹಿಳೆಯರಿಗೆ ದಾರುಣ ಚಿತ್ರಹಿಂಸೆ ನೀಡುವ ಮೂಲಕ ಹತ್ಯೆ ಮಾಡಲಾಗಿದೆ. ನರಬಲಿ ನೀಡಿದ ಬಳಿಕ ಆರೋಪಿಗಳು ಮಹಿಳೆಯರ ದೇಹದ ಮಾಂಸವನ್ನು ತಿಂದಿರುವ ಸಾಧ್ಯತೆ ಇದೆ. ಇದರ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಇನ್ನೂ ದೃಢ ಪಟ್ಟಿಲ್ಲ’ ಎಂದಿದ್ದಾರೆ.

Join Whatsapp