ಕೇರಳ ಸ್ಫೋಟ ಮೃತರ ಸಂಖ್ಯೆ 2ಕ್ಕೇರಿಕೆ: ಶರಣಾದ ಡೊಮಿನಿಕ್ ಮಾರ್ಟಿನ್ ಎಂಬಾತನ ಫೇಸ್ಬುಕ್ ವೀಡಿಯೋ ವೈರಲ್

Prasthutha|

ಇವರ ಚಟುವಟಿಕೆ ರಾಷ್ಟ್ರದ್ರೋಹಿಯಾಗಿದೆ, ಹಾಗಾಗಿ ಇವರನ್ನು ಕೊಲ್ಲುತ್ತಿದ್ದೇನೆ

- Advertisement -

ತಿರುವನಂತಪುರಂ: ಕೇರಳದ ಕೊಚ್ಚಿಯ ಕಳಮಶ್ಶೇರಿಯಲ್ಲಿ ನಡೆದ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ ಎರಡಕ್ಕೇರಿದ್ದು, ಈ ಮಧ್ಯೆ ನಾನೇ ಕಾರಣ ಎಂದು ಪೊಲೀಸರಿಗೆ ಶರಣಾದ 44 ವರ್ಷದ ಡೊಮಿನಿಕ್ ಮಾರ್ಟಿನ್ ತನ್ನ ಕೃತ್ಯಕ್ಕೆ ಸಮರ್ಥನೆ ನೀಡಿದ ವೀಡಿಯೋ ವೈರಲ್ ಆಗುತ್ತಿದೆ. ಪೊಲೀಸರಿಗೆ ಶರಣಾಗುವ ಮೊದಲು  ಆತ ಫೇಸ್ಬುಕ್ ಲೈವ್ನಲ್ಲಿ ಬಂದಿದ್ದು, ಬಾಂಬ್ ಸ್ಪೋಟ ನಡೆಸಿದ ಕಾರಣವನ್ನು ಬಹಿರಂಗಗೊಳಿಸುತ್ತಾ,   ತಾನು ಕ್ರಿಶ್ಚಿಯನ್ ಧಾರ್ಮಿಕ ಗುಂಪಿನ ಅನುಯಾಯಿ. ಆದರೆ ಇವರ ಚಟುವಟಿಕೆ ರಾಷ್ಟ್ರದ್ರೋಹಿಯಾಗಿದೆ, ಹಾಗಾಗಿ ಇವರನ್ನು ಕೊಲ್ಲುತ್ತಿದ್ದೇನೆ. ಎಂದು ಹೇಳಿಕೊಂಡಿದ್ದಾನೆ. ಅನೇಕ ಬಾರಿ ಅವರೊಂದಿಗೆ ಚರ್ಚಿಸಿದ್ದೆ, ಆದರೆ ಅವರು ಅದಕ್ಕೆ ತಯಾರಿರಲಿಲ್ಲ ಎಂದು ಮಾರ್ಟಿನ್ ಹೇಳಿದ್ದಾನೆ.

16 ವರ್ಷಗಳ ಕಾಲ ಈ ಸಂಘಟನೆಯೊಂದಿಗೆ ನಾನು ಗುರುತಿಸಿಕೊಂಡಿದ್ದೆ. ಆದರೆ, ಆರು ವರ್ಷಗಳ ಹಿಂದೆ ನನಗೆ ಈ ಸಂಘಟನೆಯ ಆಶಯಗಳು ತಪ್ಪು ಎಂದು ಮನವರಿಕೆ ಆಗ ತೊಡಗಿತು.  ತಾವು ಮಾತ್ರ ಶ್ರೇಷ್ಠ, ಉಳಿದವರೊಂದಿಗೆ ಸೇರಬಾರದು, ಅವರು ಕೊಡುವ ಆಹಾರ ಸೇವಿಸಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ. ಸಣ್ಣ ಮಕ್ಕಳ ಮೆದುಳಿಗೆ ವಿಷ ಉಣ್ಣಿಸುತ್ತಿದ್ದಾರೆ. ರಾಷ್ಟ್ರಗೀತೆ ಹಾಡಬಾರದು, ಸರ್ಕಾರಿ ಕೆಲಸಗಳು ಮಾಡಬಾರದು ಎಂದು ಮಕ್ಕಳಿಗೆ ಕಲಿಸುತ್ತಿದ್ದಾರೆ. ಅದೆಲ್ಲಾ ನಶಿಸಲ್ಪಟ್ಟ ಜನಾಂಗದ ಕೆಲಸ, ನಾವು ಮಾಡಬಾರದು ಎಂದು ಕಲಿಸಿ, ಸಮಾಜದಲ್ಲಿ ಭಿನ್ನತೆ ಸೃಷ್ಟಿಸುತ್ತಿದ್ದಾರೆ ಎಂದು ಮಾರ್ಟಿನ್ ಆರೋಪಿಸಿದ್ದಾರೆ. ಈ ಆಶಯಗಳ ವಿರುದ್ಧ ಪ್ರತಿಕ್ರಿಯಿಸಲೇಬೇಕು ಎಂದು ನಾನು ಭಾವಿಸಿದೆ. ಈ ಸಂಘಟನೆ ರಾಷ್ಟ್ರಕ್ಕೆ ಅಪಾಯಕಾರಿ ಎಂದು ನಾನು ಅರ್ಥ ಮಾಡಿಕೊಂಡ ಕಾರಣ ಈ ತೀರ್ಮಾನ ತೆಗೆದುಕೊಳ್ಳಬೇಕಾಯಿತು ಎಂದು ಆತ ತನ್ನ ವಿಕೃತ ಕೃತ್ಯವನ್ನು ಸಮರ್ಥಿಸಿದ್ದಾನೆ.

- Advertisement -

ಒಬ್ಬರಾದರೂ ಪ್ರತಿಕ್ರಿಯಿಸದಿದ್ದರೆ, ಅವರಿಗೆ ಅವರ ಆಶಯಗಳು ತಪ್ಪೆಂದು ಅರ್ಥವಾಗುವುದಿಲ್ಲ. ಅದಕ್ಕಾಗಿ ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಾನು ಬಹಳ ಯೋಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದೂ ಆತ ಹೇಳಿಕೊಂಡಿದ್ದಾನೆ.

Join Whatsapp