ಕೇರಳ| ಬೈಕ್ ಕಳ್ಳತನ ಶಂಕೆ; ಯುವಕನ ಹತ್ಯೆ

Prasthutha|

ಪಾಲಕ್ಕಾಡ್: ಬೈಕ್ ಕಳ್ಳನೆಂದು ಶಂಕಿಸಿ ಯುವಕನೊಬ್ಬನನ್ನು ಜನರ ಗುಂಪೊಂದು ಥಳಿಸಿ ಕೊಲೆ ಮಾಡಿದ ದುರ್ಘಟನೆ ಪಾಲಕ್ಕಾಡಿನ ಒಲವಕ್ಕಾಡ್ ಎಂಬಲ್ಲಿ ನಡೆದಿದೆ.

- Advertisement -

ರಫೀಕ್(27) ಎಂಬಾತ ಮೃತ ದುರ್ದೈವಿ. ರಾತ್ರಿ ಒಂದು ಗಂಟೆಗೆ ಘಟನೆ ನಡೆದಿದ್ದು, ಆರೋಪಿಗಳಾದ ಆಲತ್ತೂರ್ ನ ಮನೀಷ್, ಗುರುವಾಯೂರಪ್ಪನ್, ಸೂರ್ಯ ಎಂಬವರನ್ನು ಪಾಲಕ್ಕಾಡ್ ಪೊಲೀಸರು ಬಂಧಿಸಿದ್ದಾರೆ.

ಕುಡಿಯಲು ಬಾರ್‌ಗೆ ಹೋಗಿದ್ದ ಆರೋಪಿಗಳಾದ ಮೂರು ಮಂದಿ ಹೊರಗೆ ಬಂದಾಗ ಬೈಕ್ ಕಾಣೆಯಾಗಿತ್ತು. ಸಿಸಿಟಿವಿಯಲ್ಲಿ ಬೈಕ್ ನೊಂದಿಗೆ ವ್ಯಕ್ತಿಯೊಬ್ಬ ಹೋಗುತ್ತಿರುವುದು ಕಂಡು ಬಂದಿದ್ದು, ಹುಡುಕಾಟದ ವೇಳೆ ಕಳ್ಳ ಧರಿಸಿರುವಂತಹ ವಸ್ತ್ರವನ್ನು ರಫೀಕ್ ಕೂಡಾ ಧರಿಸಿದ್ದ. ಈತನೇ ಕಳ್ಳನೆಂದು ಭಾವಿಸಿದ ಈ ಮೂವರು ರಫೀಕ್ ನನ್ನುತಡೆದು ನಿಲ್ಲಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ

- Advertisement -

ಕೊಲೆ ಮಾಡಿದ ಮೂವರು ಪೊಲೀಸರ ವಶದಲ್ಲಿದ್ದು,ಕೆಲ ಸ್ಥಳೀಯರೂ ರಫೀಕ್‌ಗೆ ಥಳಿಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೂರ್ಛೆ ಬಿದ್ದಾಗ ಗ್ಯಾಂಗ್ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸ್ಥಳೀಯರು ಅವರನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತ ಶರೀರವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.



Join Whatsapp