ಕೇರಳ| ಕಾರಿಗೆ ಒರಗಿದ್ದ ಕಾರಣ ಒದೆ ತಿಂದಿದ್ದ ಬಾಲಕನಿಗೆ ಆರ್ಥಿಕ ನೆರವು ನೀಡಿದ ಉದ್ಯಮಿ

Prasthutha|

- Advertisement -

ತಿರುವನಂತಪುರ: ಕೇರಳದಲ್ಲಿ ಇತ್ತೀಚೆಗೆ ಕಾರಿಗೆ ಒರಗಿದ್ದ ಕಾರಣಕ್ಕಾಗಿ ಒದೆ ತಿಂದಿದ್ದ ಬಾಲಕನಿಗೆ ಉದ್ಯಮಿಯೊಬ್ಬರು ಆರ್ಥಿಕ ನೆರವು ನೀಡಿದ್ದಾರೆ.

ಕಾರಿಗೆ ಒರಗಿದ್ದ ಬಾಲಕನಿಗೆ ಯುವಕನೋರ್ವ ಕಾಲಿನಿಂದ‌ ಒದೆ ನೀಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಬಾಲಕನಿಗೆ ಒದೆ ನೀಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

- Advertisement -

ಇದೀಗ ಬಾಲಕನಿಗೆ ಕೇರಳದ ಅಚ್ಚಾಯನ್ಸ್‌ ಜ್ಯುವೆಲ್ಲರಿಯ ಮಾಲೀಕರಾದ ಟೋನಿ ವರ್ಕಿಚ್ಚನ್ ಆರ್ಥಿಕ ಸಹಾಯ ಮಾಡಿ ತನ್ನ ಕಿಯಾ ಕಾರ್ನಿವಲ್‌ ಕಾರ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡಿದ್ದಾರೆ.

ಬ್ಯುಸಿನೆಸ್‌ಮ್ಯಾನ್‌ ಬಾಲಕನಿಗೆ ಭೇಟಿ‌‌ ಮಾಡಿ 20,000 ನಗದು ನೀಡಿದ್ದಾರೆ ಎಂದು ವರದಿಯಾಗಿದೆ.

Join Whatsapp