ಕೆಂಗೇರಿ: ನಾಪತ್ತೆಯಾಗಿದ್ದ ಇಬ್ಬರು ಮಕ್ಕಳಲ್ಲಿ ಒಬ್ಬರು ಶವವಾಗಿ ಪತ್ತೆ

Prasthutha|

ಕೆಂಗೇರಿ: ಕೆರೆಯಂಗಳದಲ್ಲಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಒಬ್ಬರು ಶವವಾಗಿ ಪತ್ತೆಯಾಗಿದ್ದಾರೆ.

- Advertisement -


ಕೆಂಗೇರಿ ಬಳಿಯ ಹರ್ಷ ಲೇಔಟ್ ನಿವಾಸಿಯಾದ ಜಯಮ್ಮ ಎಂಬುವರ ಮಕ್ಕಳಾದ ಜಾನ್ಸನ್( 15) ಹಾಗೂ ಮಹಾಲಕ್ಚ್ಮಿ(13) ಎಂಬುವರು ಸೋಮವಾರ ಸಂಜೆ ಕೆಂಗೇರಿ ಕೆರೆ ಅಂಗಳಕ್ಕೆ ತೆರಳಿದ್ದರು.


ಈ ವೇಳೆ ಸಹೋದರ ಜಾನ್ಸನ್ ಕಾಲು ಜಾರಿ ಕೆರೆಗೆ ಬಿದ್ದರು, ಅವರನ್ನು ಹಿಡಿಯಲು ಪ್ರಯತ್ನಿಸಿದ ಸಹೋದರಿ ಕೂಡ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದ್ದು ಮೃತ ಜಾನ್ಸನ್ ಶವ ಕೆರೆಯಲ್ಲಿ ಪತ್ತೆಯಾಗಿದೆ.

- Advertisement -


ಕೆಲಸದ ನಿಮಿತ್ತ ತಾಯಿ ಹೊರ ಹೋಗಿದ್ದಾಗ ಕೆರೆ ಬಳಿಗೆ ಬಂದಿದ್ದ ಮಕ್ಕಳು, ಕಾಲು ಜಾರಿ ಕೆರೆಗೆ ಬಿದ್ದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp