ಕುತ್ತಾರು ದುರಂತ: ಸಂತ್ರಸ್ತ ಕುಟುಂಬಕ್ಕೆ ಸ್ಪೀಕರ್ ಖಾದರ್ ಪರಿಹಾರ ಚೆಕ್ ಹಸ್ತಾಂತರ

Prasthutha|

ಮಂಗಳೂರು: ಕುತ್ತಾರಿನ ಮದನಿ ನಗರದಲ್ಲಿ ಇತ್ತೀಚೆಗೆ ನಡೆದ ದುರಂತದಲ್ಲಿ ಮೃತಪಟ್ಟ ಕುಟುಂಬಕ್ಕೆ ಸರಕಾರದ ವತಿಯಿಂದ ಪರಿಹಾರ ಧನವನ್ನು ಚೆಕ್ ಅನ್ನು ಸ್ಪೀಕರ್ ಯು. ಟಿ. ಖಾದರ್ ಹಸ್ತಾಂತರಿಸಿದರು.

- Advertisement -

ಬಳಿಕ ಮಾತನಾಡಿದ ಅವರು, ಆ ಕುಟುಂಬದ ದುಃಖದಲ್ಲಿ ಇಡೀ ಊರೇ ಜಾತಿ -ಧರ್ಮ ಬಿಟ್ಟು ಜೊತೆ ನಿಂತಿದೆ. ಅದಕ್ಕೆ ನಾನು ಅಭಿನಂದಿಸುತ್ತೇನೆ. ಸರಕಾರದ ವತಿಯಿಂದ ಏನು ಪರಿಹಾರ ದೊರೆಯಬೇಕು ಅದನ್ನು ನಾನು ತೆಗೆಸಿ ಕೊಟ್ಟಿದ್ದೇನೆ. ಅವರಿಗೆ ಎಷ್ಟ ಪರಿಹಾರ ಸರಕಾರ ಕೊಟ್ಟರೂ ಅವರ ದುಃಖಕ್ಕೆ ಸ್ಪಂದಿಸಲು ಸಾಧ್ಯವಿಲ್ಲ. ಅವರ ಸಹಾಯಕ್ಕೆ ನಾವು ನಿಲ್ಲಬೇಕು ಎಂದು ಅವರು ಹೇಳಿದರು.

Join Whatsapp