ಕಥುವಾ ಪ್ರಕರಣಕ್ಕೆ ದೇಣಿಗೆ ವಿವಾದ | ಯೂತ್ ಲೀಗ್ ನಿಂದ ಹಣ ಪಡೆದ ಬಗ್ಗೆ ನಿರಾಕರಿಸಿದ ನ್ಯಾಯವಾದಿ ದೀಪಿಕಾ ಸಿಂಗ್

Prasthutha|

ಕೋಝಿಕ್ಕೋಡ್ : ಕಥುವಾ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿ, ತಮಗೆ ಮತ್ತು ಸಂತ್ರಸ್ತ ಕುಟುಂಬಕ್ಕೆ ಕೇರಳದ ಯೂತ್ ಲೀಗ್ ದೇಣಿಗೆ ನೀಡಿದೆ ಎಂಬ ಸುದ್ದಿಗಳನ್ನು ನ್ಯಾಯವಾದಿ ದೀಪಿಕಾ ಸಿಂಗ್ ರಾಜಾವತ್ ನಿರಾಕರಿಸಿದ್ದಾರೆ.

- Advertisement -

ತಾವು ಯಾವುದೇ ಹಣ ಸ್ವೀಕರಿಸಿಲ್ಲ ಎಂದು ದೀಪಿಕಾ ಹೇಳಿದ್ದಾರೆ. ದೀಪಿಕಾ ಪ್ರಕರಣದ ಪರವಾಗಿ ಉಚಿತವಾಗಿ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರು ಕೇರಳದಿಂದ ಯಾವುದೇ ಹಣ ಪಡೆದಿಲ್ಲ ಎನ್ನಲಾಗಿದೆ.

ಹಣ ನೀಡಿದ್ದೇವೆ ಎಂದು ಹೇಳುತ್ತಿರುವ ಯೂತ್ ಲೀಗ್ ನ ಮುಬೀನ್ ಫಾರೂಕಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ದೀಪಿಕಾ ಸಿಂಗ್ ಹೇಳಿದ್ದಾರೆ. ಮುಬೀನ್ ಫಾರೂಕಿ ಈ ಪ್ರಕರಣವನ್ನು ಕೋರ್ಟ್ ನಲ್ಲಿ ನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ಮುಬೀನ್ ಫಾರೂಕಿ ಯಾವುದೇ ಕೋರ್ಟ್ ಗೂ ಹಾಜರಾಗಿಲ್ಲ ಎಂದು ದೀಪಿಕಾ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.

- Advertisement -

ಕಥುವಾ ಸಂತ್ರಸ್ತ ಕುಟುಂಬಕ್ಕೆ 5 ಲಕ್ಷ ರೂ. ಮತ್ತು ಪ್ರಕರಣದ ಪರವಾಗಿ ಕಾನೂನು ಹೋರಾಟ ನಡೆಸಿದ ದೀಪಿಕಾ ಸಿಂಗ್ ಗೆ 9.35 ಲಕ್ಷ ರೂ. ನೀಡಿದ್ದೇವೆ ಎಂದು ಯೂತ್ ಲೀಗ್ ಪ್ರತಿನಿಧಿಗಳು ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದರು.



Join Whatsapp