ಕಾಸರಗೋಡು ಮೂಲದ ವೈದ್ಯರ ಅನುಮಾನಾಸ್ಪದ ಸಾವು: ಸಮಗ್ರ ತನಿಖೆಗೆ ಗೃಹ ಸಚಿವರಿಗೆ ಮನವಿ

Prasthutha|

ಬೆಂಗಳೂರು: ಕಳೆದ ವಾರ ಕುಂದಾಪುರ ಬಳಿ ರೈಲ್ವೇ ಹಳಿಯ ಮೇಲೆ ಮೃತ ಸ್ಥಿತಿಯಲ್ಲಿ ಪತ್ತೆಯಾದ ಕಾಸರಗೋಡು ಮೂಲದ ವೈದ್ಯರೊಬ್ಬರ ಸಾವಿನ ಕುರಿತು ಕೇಸು ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.

- Advertisement -


ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಇಂದು ಮಂಗಳೂರು ನಗರದಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಡಾ. ಭರತ್ ಶೆಟ್ಟಿ ಅವರು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದರು.


ಇದೇ ಸಂಬಂಧ ವಿಶ್ವ ಹಿಂದೂ ಪರಿಷತ್ ಸದಸ್ಯರು ಕೂಡ ಸಚಿವರಿಗೆ ಮನವಿ ಸಲ್ಲಿಸಿ, ಸಂಶಯಾಸ್ಪವಾಗಿ ಮೃತಪಟ್ಟ ಕಾಸರಗೋಡು ವೈದ್ಯ ಕೃಷ್ಣಮೂರ್ತಿ ಅವರ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Join Whatsapp