6ರಿಂದ 9 ನೇ ಶಾಲಾ ತರಗತಿಗಳು ಮತ್ತೆ ಬಂದ್ | ರಾಜ್ಯ ಸರ್ಕಾರದಿಂದ ಕೋವಿಡ್ ಗೆ ಹೊಸ ಮಾರ್ಗಸೂಚಿ ಪ್ರಕಟ

Prasthutha|

ಬೆಂಗಳೂರು : ಕರ್ನಾಟಕ ರಾಜ್ಯ ಸರಕಾರ ಕೋವಿಡ್ ಎರಡನೇ ಅಲೆಯನ್ನು ಎದುರಿಸಲು ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದರ ಪ್ರಕಾರ ಆರರಿಂದ ಒಂಬತ್ತನೇ ತರಗತಿ ವರೆಗಿನ ಎಲ್ಲಾ ಶಾಲಾ ತರಗತಿಗಳನ್ನು ಮುಚ್ಚಲು ತೀರ್ಮಾನಿಸಲಾಗಿದೆ. ವಿದ್ಯಾಗಮಕ್ಕೂ ಬ್ರೇಕ್ ಬೀಳಲಿದೆ. ಇದರ ಜೊತೆಗೆ ರಾಜ್ಯದಾದ್ಯಂತ ಯಾವುದೇ ರೀತಿಯ ರಾಲಿ, ಮುಷ್ಕರ, ಧರಣಿಗಳಿಗೆ ನಿಷೇಧ ವಿಧಿಸಲಾಗಿದೆ.

- Advertisement -

ಹೊಸ ಮಾರ್ಗಸೂಚಿಯ ಪ್ರಕಾರ ಕಚೇರಿ ಕೆಲಸಗಳನ್ನು ಆದಷ್ಟು ಮನೆಯಲ್ಲೇ ನಿರ್ವಹಿಸುವಂತೆ ಕೋರಲಾಗಿದೆ. ಧಾರ್ಮಿಕ ಆಚರಣೆ, ಮೇಳಗಳಿಗೆ ತಡೆ ಹೇರಲಾಗಿದೆ.  ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕಾಗಿದೆ. ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರಿಗೆ ಮಿತಿ ಹೇರಲಾಗಿದೆ. ಈ ಮಾರ್ಗಸೂಚಿ ಎಪ್ರಿಲ್ 20 ರ ವರೆಗೆ ಅನ್ವಯಿಸಲಿದೆ.

Join Whatsapp