ಕರ್ನಾಟಕದ ದಿನಪತ್ರಿಕೆ ಜನರ ಮುಂದೆ ಬೆತ್ತಲಾಗಿದೆ: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Prasthutha|

ಬೆಂಗಳೂರು: ಕಾಂಗ್ರೆಸ್ ವಿರುದ್ಧ ಸುದ್ದಿ ರೂಪದಲ್ಲಿ ಜಾಹೀರಾತು ನೀಡಿರುವ ಬಿಜೆಪಿಯ ಕ್ರಮವನ್ನು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಂಡಿಸಿದ್ದು, ಕರ್ನಾಟಕದ ದಿನಪತ್ರಿಕೆ ಜನರ ಮುಂದೆ ಬೆತ್ತಲಾಗಿದೆ ಎಂದು ಹೇಳಿದ್ದಾರೆ.

- Advertisement -

ಒಂದೇ ವಾರದಲ್ಲಿ ಎರಡೆರೆಡು ಬಾರಿ ಪತ್ರಿಕೆಗಳಲ್ಲಿ ಕಾಂಗ್ರೆಸ್ ವಿರುದ್ಧ ಮುಖಪುಟದ ಜಾಹೀರಾತು ನೀಡುತ್ತಿರುವ ಬಿಜೆಪಿಯ ನಡೆ ಮತ್ತು ದಿನಪತ್ರಿಕೆಗಳ ಅನೈತಿಕತೆ ಕುರಿತಂತೆ ಟ್ವೀಟ್ ಮಾಡಿದ ಅವರು ಪ್ರಜಾತಂತ್ರದ ನಾಲ್ಕನೇ ಅಂಗ ಎಂದು ನಾವು ನಂಬುವ ಕೆಲವು ಮಾಧ್ಯಮಗಳು ಇಂದು ಕರ್ನಾಟಕದ ಜನರ ಮುಂದೆ ಬೆತ್ತಲೆಯಾದದ್ದು ಹೀಗೆ, ಈ ಮುಖಪುಟ ತಯಾರಾದದ್ದು ಯಾವ IT ಸೆಲ್ನಲ್ಲಿ ಎಂಬುದು ನಿಮ್ಮ ವಿವೇಚನೆಗೆ ಬಿಟ್ಟಿದ್ದೇನೆ ಎಂದು ಟೀಕಿಸಿದ್ದಾರೆ.



Join Whatsapp