ಕರ್ನಾಟಕ ಬಂದ್ ಗೆ ಬೆಂಬಲ: ಮಂಗಳೂರಿನ ದಕ್ಕೆ ಸಂಪೂರ್ಣ ಸ್ತಬ್ಧ

Prasthutha|

ಮಂಗಳೂರು: ಹಿಜಾಬ್ ಕುರಿತು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಮಂಗಳೂರಿನ ಮೀನುಗಾರಿಕೆಯ ಪ್ರಮುಖವಾದ ಕೇಂದ್ರವಾದ ದಕ್ಕೆ ಸಂಪೂರ್ಣ ಸ್ತಬ್ಧಗೊಂಡಿದೆ. ಮೀನುಗಾರಿಕಾ ದಕ್ಕೆಯಲ್ಲಿ ಜನರ ಓಡಾಟವಿಲ್ಲದೇ ಬಿಕೋ ಎನ್ನುತ್ತಿದೆ. ಸ್ಥಳದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.

- Advertisement -

ಮಂಗಳೂರಿನ ಬಂದರು, ಕುದ್ರೋಳಿ, ಸ್ಟೇಟ್ ಬ್ಯಾಂಕ್, ಪಾಂಡೇಶ್ವರ ಸೇರಿದಂತೆ ನಗರದ ಹಲವೆಡೆ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಿವೆ. ತರಕಾರಿ, ಮೀನು, ದಿನಸಿ ವ್ಯಾಪಾರಿಗಳು ವಹಿವಾಟು ನಡೆಸದೆ ಬಂದ್ ಗೆ ಬೆಂಬಲ ಸೂಚಿಸಿದ್ದಾರೆ.

Join Whatsapp