ಕಾರ್ಕಳ | ಶಾಲಾ ವಾಹನ ಅಪಘಾತ: ಓರ್ವ ವಿದ್ಯಾರ್ಥಿ ಮೃತ್ಯು

Prasthutha|

ಕಾರ್ಕಳ: ಶಾಲಾ ವಾಹನ ಉರುಳಿ ಬಿದ್ದು, ವಿದ್ಯಾರ್ಥಿಯೋರ್ವ ಮೃತ ಪಟ್ಟ ಘಟನೆ ಕುದುರೆಮುಖ-ಮಾಳ ಹೆದ್ದಾರಿಯ ಘಾಟಿ ರಸ್ತೆಯ ಎಸ್ .ಕೆ ಬಾರ್ಡರ್ ಬಳಿ ನಡೆದಿದೆ.

- Advertisement -

ಧಾರಾವಾಡ ಮೂಲದ ಹೇಮಂತ್ (24) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. 

ಶಾಲಾ ಮಕ್ಕಳು ಪ್ರವಾಸ ನಿಮಿತ್ತ ಉಡುಪಿ ಕಡೆಗೆ ತೆರಳುತ್ತಿರುವ ವೇಳೆ, ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ.

- Advertisement -

ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದು, ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.



Join Whatsapp